ADVERTISEMENT

ಉಳ್ಳಾಲ: ನೇತ್ರಾವತಿ ಸೇತುವೆಯಲ್ಲಿ ಅನಾಥ ಸ್ಥಿತಿಯಲ್ಲಿ ಕಾರು ಪತ್ತೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2020, 3:30 IST
Last Updated 16 ಏಪ್ರಿಲ್ 2020, 3:30 IST
ಪತ್ತೆಯಾಗಿರುವ ಕಾರು
ಪತ್ತೆಯಾಗಿರುವ ಕಾರು   

ಉಳ್ಳಾಲ: ನೇತ್ರಾವತಿ ಸೇತುವೆಯಲ್ಲಿ ಬುಧವಾರ ತಡರಾತ್ರಿ ಅನಾಥ ಸ್ಥಿತಿಯಲ್ಲಿ ಕಾರೊಂದು ಪತ್ತೆಯಾಗಿದೆ. ಸ್ಥಳಕ್ಕಾಗಮಿಸಿದ ಕಂಕನಾಡಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ‌.ಕೆ.ಎ 19 ಎಂ ಡಿ 9355 ನಂಬರಿನ ಫಿಯಟ್ ಕಾರು ಅನಾಥ ಸ್ಥಿತಿಯಲ್ಲಿ ತಡರಾತ್ರಿ 10.30 ರ ವೇಳೆ ಪತ್ತೆಯಾಗಿದೆ. ಕಾರಿನ ಲೈಟ್ ಉರಿಯುತ್ತಿದ್ದು, ಬಾಗಿಲು ತೆರೆದ ಸ್ಥಿತಿಯಲ್ಲಿತ್ತು ಎಂದು ವಾಹನ ಸವಾರರು ತಿಳಿಸಿದ್ದಾರೆ.ಕಾರಿನ ಒಳಗೆ ಸೋಮೇಶ್ವರ ಕೊಲ್ಯ ನಿವಾಸಿ ರಾಜಶೇಖರ್ ಗಟ್ಟಿ ಎಂಬವರ ಪುತ್ರ ವಿಕ್ರಂ ಗಟ್ಟಿ ಎಂಬವರಿಗೆ ಸೇರಿದ ಪ್ಯಾನ್ ಕಾರ್ಡು ದೊರೆತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಕಾರು ಚಾಲಕನಿಗಾಗಿ ಶೋಧ ಮುಂದುವರಿಸಿದ್ದಾರೆ‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.