ADVERTISEMENT

ದಾವಣಗೆರೆ: ಪತ್ರಿಕಾ ವಿತರಕರಿಗೆ, ಏಜೆಂಟ್‌ಗಳಿಗೆ ಕೊರೊನಾ ಲಸಿಕೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 3:11 IST
Last Updated 22 ಜೂನ್ 2021, 3:11 IST
ದಾವಣಗೆರೆಯ ಎಲ್ಲ ಪತ್ರಿಕೆಗಳ ಪತ್ರಿಕಾ ವಿತರಕರಿಗೆ, ಏಜೆಂಟರಿಗೆ ಸೋಮವಾರ ಜಿಲ್ಲಾ ವರದಿಗಾರರ ಕೂಟದಲ್ಲಿ ಕೊರೊನಾ ನಿರೋಧಕ ಲಸಿಕೆ ಹಾಕಲಾಯಿತು
ದಾವಣಗೆರೆಯ ಎಲ್ಲ ಪತ್ರಿಕೆಗಳ ಪತ್ರಿಕಾ ವಿತರಕರಿಗೆ, ಏಜೆಂಟರಿಗೆ ಸೋಮವಾರ ಜಿಲ್ಲಾ ವರದಿಗಾರರ ಕೂಟದಲ್ಲಿ ಕೊರೊನಾ ನಿರೋಧಕ ಲಸಿಕೆ ಹಾಕಲಾಯಿತು   

ದಾವಣಗೆರೆ: ಎಲ್ಲ ಪತ್ರಿಕೆಗಳ ಪತ್ರಿಕಾ ವಿತರಕರಿಗೆ, ಏಜೆಂಟರಿಗೆ ಸೋಮವಾರ ಜಿಲ್ಲಾ ವರದಿಗಾರರ ಕೂಟದಲ್ಲಿ ಕೊರೊನಾ ನಿರೋಧಕ ಲಸಿಕೆ ಹಾಕಲಾಯಿತು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಲಸಿಕೆ ಪಡೆದವರಿಗೆ ಸೇಬು ಹಾಗೂ ಮಾವಿನ ಹಣ್ಣಿನ ಜ್ಯೂಸ್‌ ಪ್ಯಾಕೇಟ್ ನೀಡಿದರು. ಜಿಲ್ಲಾ ಪಂಚಾಯಿತಿ ಸಿಇಒ ಡಾ. ವಿಜಯ ಮಹಾಂತೇಶ ದಾನಮ್ಮನವರ್, ಡಿಹೆಚ್‍ಒ ಡಾ.ನಾಗರಾಜ್, ಆರ್‌ಸಿಎಚ್‌ಒ ಡಾ. ಮೀನಾಕ್ಷಿ , ಕೂಟದ ಅಧ್ಯಕ್ಷ ಜಿ.ಎಂ.ಆರ್‌. ಆರಾಧ್ಯ, ಪದಾಧಿಕಾರಿಗಳು, ಸದಸ್ಯರು ಇದ್ದರು.

ಸಂಸದ ಜಿ.ಎಂ. ಸಿದ್ದೇಶ್ವರ ಅವರು ಕೂಡ ಮಧ್ಯೆ ಭೇಟಿ ನೀಡಿ ಲಸಿಕೆ ಪಡೆದವರ ಆರೋಗ್ಯ ವಿಚಾರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.