ADVERTISEMENT

ದಾವಣಗೆರೆ: ಕದ್ದುಮುಚ್ಚಿ ಮಾಂಸ ಮಾರಾಟ- ಅಂಗಡಿ ಮುಚ್ಚಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2021, 5:55 IST
Last Updated 25 ಏಪ್ರಿಲ್ 2021, 5:55 IST
ಕದ್ದುಮುಚ್ಚಿ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಯನ್ನು ಮುಚ್ಚಿಸಿದ ಪೊಲೀಸರು
ಕದ್ದುಮುಚ್ಚಿ ಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಯನ್ನು ಮುಚ್ಚಿಸಿದ ಪೊಲೀಸರು   

ದಾವಣಗೆರೆ: ವಾರಾಂತ್ಯ ಕರ್ಫ್ಯೂ ಹಾಗೂ ಮಹಾವೀರ ಜಯಂತಿ ನಡುವೆಯೂ ಕದ್ದುಮುಚ್ಚಿ ಮಾರಾಟ ಮಾಡುತ್ತಿದ್ದ ಚಿಕನ್ ಸೆಂಟರ್‌ಗಳನ್ನು ಪೊಲೀಸರು ಮುಚ್ಚಿಸಿದರು.

ಮಾಂಸ ಮಾರಾಟದ ಅಂಗಡಿಗಳನ್ನು ಮುಚ್ಚುವಂತೆ ಮಹಾನಗರ ಪಾಲಿಕೆ ಪ್ರಕಟಣೆ ಹೊರಡಿಸಿದ್ದರೂ ವಿನೋಬ ನಗರದ ಖಾನ್ ಚಿಕನ್ ಹಾಗೂ ರಜಾ ಚಿಕನ್ ಸೆಂಟರ್‌ಗಳಲ್ಲಿ ಮಾರಾಟ ನಡೆಯುತ್ತಿತ್ತು.

ಬಡಾವಣೆ ಠಾಣೆಯ ಎಸ್ಐ ಅರವಿಂದ್ ನೇತೃತ್ವದ ತಂಡ ಬಾಗಿಲು ಮುಚ್ಚಿಸಿದಲ್ಲದೇ ಮಾಲೀಕರಿಗೆ ಎಚ್ಚರಿಕೆ ನೀಡಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.