ADVERTISEMENT

ಸಂತೇಬೆನ್ನೂರು | ಸತತ ಮಳೆ; ಮನೆ ಕುಸಿತ

​ಪ್ರಜಾವಾಣಿ ವಾರ್ತೆ
Published 24 ಜುಲೈ 2023, 16:45 IST
Last Updated 24 ಜುಲೈ 2023, 16:45 IST
ಸಂತೇಬೆನ್ನೂರು ಸಮೀಪದ ಗಿರಿಯಾಪುರದಲ್ಲಿ ಅಂಜಿನಮ್ಮ ಅವರ ಮನೆ ಸತತ ಮಳೆಯಿಂದ ಕುಸಿದಿದೆ. ತಹಶೀಲ್ದಾರ್ ಎರ್ರಿಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರು
ಸಂತೇಬೆನ್ನೂರು ಸಮೀಪದ ಗಿರಿಯಾಪುರದಲ್ಲಿ ಅಂಜಿನಮ್ಮ ಅವರ ಮನೆ ಸತತ ಮಳೆಯಿಂದ ಕುಸಿದಿದೆ. ತಹಶೀಲ್ದಾರ್ ಎರ್ರಿಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರು   

ಸಂತೇಬೆನ್ನೂರು: ಹೋಬಳಿ ವ್ಯಾಪ್ತಿಯಲ್ಲಿ ಕಳೆದೆರಡು ದಿನದಿಂದ ಸುರಿಯುತ್ತಿರುವ ಸತತ ಮಳೆಗೆ ಸಮೀಪದ ಗಿರಿಯಾಪುರ ಗ್ರಾಮದ ಅಂಜಿನಮ್ಮ ಅವರ ಮನೆ ಸಂಪೂರ್ಣ ಕುಸಿದಿದೆ. ತಹಶೀಲ್ದಾರ್ ಎರ್ರಿಸ್ವಾಮಿ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಮಳೆಯಲ್ಲೂ ರೈತರು ಮೆಕ್ಕೆಜೋಳದ ಫಸಲಿಗೆ ಕಳೆ ಕೊಯ್ಲು, ಗೊಬ್ಬರ ಸಿಂಪಡಣೆ ನಡೆಸುತ್ತಿದ್ದಾರೆ. ಮಳೆ ಮುಂದುವರಿದರೆ ಕೆಲ ಜಮೀನುಗಳಲ್ಲಿ ಮೆಕ್ಕೆಜೋಳ ಬೆಳೆಗೆ ಹಾನಿ ಸಂಭವಿಸುವ ಆತಂಕ ರೈತರಲ್ಲಿ ಮಡುಗಟ್ಟಿದೆ.

ಭತ್ತದ ನಾಟಿಗೆ ರೈತರು ಸಿದ್ಧತೆ ನಡೆಸಿದ್ದಾರೆ. ಉತ್ತಮ ಮಳೆ ಹಿನ್ನೆಲೆಯಲ್ಲಿ ಭದ್ರಾ ಜಲಾಯಶಕ್ಕೆ ಒಳಹರಿವು ಹೆಚ್ಚುತ್ತಿರುವುದು ರೈತರಿಗೆ ಭರವಸೆ ನೀಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.