ADVERTISEMENT

ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ ಮುತಾಲಿಕ್‌ಗೆ ಬೆದರಿಕೆ ಕರೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2022, 20:23 IST
Last Updated 8 ಜೂನ್ 2022, 20:23 IST
ಫೇಸ್‌ಬುಕ್‌ನಲ್ಲಿ ಪ್ರಕಟಗೊಂಡ ಪೊಸ್ಟ್
ಫೇಸ್‌ಬುಕ್‌ನಲ್ಲಿ ಪ್ರಕಟಗೊಂಡ ಪೊಸ್ಟ್   

ಧಾರವಾಡ: ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಹಾಗೂ ಬಿಜೆಪಿ ಮುಖಂಡ ಯಶ್‌ಪಾಲ್ ಸುವರ್ಣ ಅವರ ತಲೆ ಕಡಿದವರಿಗೆ ₹10 ಲಕ್ಷ ಕೊಡುವುದಾಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹರಿದಾಡುತ್ತಿದೆ. ಇದ ರೊಂದಿಗೆ, ಎರಡು ಬೆದರಿಕೆ ಕರೆಗಳು ಬಂದಿವೆ ಎಂದು ಮುತಾಲಿಕ್ ಹೇಳಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಪ್ರಮೋದ ಮುತಾಲಿಕ್, ‘ದೇವಾಲಯಗಳ ರಕ್ಷಣೆ ಹಾಗೂ ಹಿಂದೂಗಳ ಪರವಾಗಿ ಧ್ವನಿ ಎತ್ತಿರುವುದಕ್ಕೆ ಎರಡು ಬೆದರಿಕೆ ಕರೆಗಳು ಬಂದಿವೆ. ಇಂಥ ಬೆದರಿಕೆಗೆ ಬಗ್ಗಲ್ಲ. ಹಿಂದೆಯೂ ಇಂಥ ಕರೆಗಳು ಬಂದಿದ್ದವು. ಗುರುವಾರ ಕಮಿಷನರ್ ಕಚೇರಿಗೆ ದೂರು ನೀಡಲಾಗುವುದು’ ಎಂದರು.

‘ಮೊದಲು ಕೋರ್ಟ್ ಆದೇಶ ಪಾಲಿಸಿ, ದೇವಸ್ಥಾನ ಕೆಡವಿ ಮಸೀದಿ ಕಟ್ಟಿದ್ದನ್ನು ವಾಪಸ್ ಕೊಡಿ. ನಮ್ಮ ದೇಶ ಭಕ್ತಿಯ ಕಾರ್ಯವನ್ನು ಇನ್ನೂ ಪ್ರಖರ ವಾಗಿ ಹಾಗೂ ಗಟ್ಟಿಯಾಗಿ ಮಾಡುತ್ತೇವೆ. ತಾಕತ್ತಿದ್ದರೆ ತಡೆದು ನೋಡಿ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.