ADVERTISEMENT

ಹುಬ್ಬಳ್ಳಿ: ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಕೊಲೆಯಾದ ಹೋಟೆಲ್‌ನಲ್ಲಿ ಹೋಮ– ಹವನ

​ಪ್ರಜಾವಾಣಿ ವಾರ್ತೆ
Published 8 ಜುಲೈ 2022, 9:09 IST
Last Updated 8 ಜುಲೈ 2022, 9:09 IST
ಹುಬ್ಬಳ್ಳಿ ನಗರದ ದಿ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಶುಕ್ರವಾರ ಸುದರ್ಶನ ಹೋಮ ಮತ್ತು ಹವನ ಮಾಡಲಾಯಿತು.
ಹುಬ್ಬಳ್ಳಿ ನಗರದ ದಿ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಶುಕ್ರವಾರ ಸುದರ್ಶನ ಹೋಮ ಮತ್ತು ಹವನ ಮಾಡಲಾಯಿತು.   

ಹುಬ್ಬಳ್ಳಿ: ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಅವರು ಕೊಲೆಯಾದ ನಗರದ ಉಣಕಲ್ ಬಳಿಯ ದಿ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಶುಕ್ರವಾರ ಸುದರ್ಶನ ಹೋಮ ಮತ್ತು ಹವನ ಮಾಡಲಾಯಿತು.

ಗುರೂಜಿ ಕೊಲೆ ಬಳಿಕ ಹೋಟೆಲ್‌ನಲ್ಲಿ ಭಯದ ವಾತಾವರಣ ನಿರ್ಮಾಣಗೊಂಡಿತ್ತು. ಸಿಬ್ಬಂದಿಯೂ ಆತಂಕದಿಂದಲೇ ಕೆಲಸ ಮಾಡುತ್ತಿದ್ದರು. ಭಯ ನಿವಾರಿಸುವುದಕ್ಕಾಗಿ ಆಡಳಿತ ಮಂಡಳಿಯು, ಸ್ಥಳದಲ್ಲೇ ಹೋಮ ಮತ್ತು ಹವನ ಮಾಡಿಸಿತು.

ಇಬ್ಬರು ಪುರೋಹಿತರು ಮಂತ್ರಘೋಷಗಳೊಂದಿಗೆ ಧಾರ್ಮಿಕ ಕಾರ್ಯಕ್ರಮಗಳನ್ನು ಮುಗಿಸಿದರು. ಹೋಟೆಲ್‌ನಲ್ಲಿ ಮುಂದೆ ಇಂತಹ ಅಹಿತಕರ ನಡೆಯಬಾರದು ಎಂದು ಸಿಬ್ಬಂದಿ ದೇವರನ್ನು ಪ್ರಾರ್ಥಿಸಿದರು.

ADVERTISEMENT

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.