ADVERTISEMENT

ಮೊಸರನ್ನ ಊಟ‌ ಮಾಡಿ ನಿದ್ದೆಗೆ ಜಾರಿದ ಸಚಿವ ಅಶೋಕ್

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2021, 18:01 IST
Last Updated 20 ಮಾರ್ಚ್ 2021, 18:01 IST
ಸಚಿವ ಆರ್.‌ಅಶೋಕ್
ಸಚಿವ ಆರ್.‌ಅಶೋಕ್   

ಛಬ್ಬಿ (ಹುಬ್ಬಳ್ಳಿ): ಗ್ರಾಮದಲ್ಲಿ ಬೆಳಿಗ್ಗೆಯಿಂದ ಅಧಿಕಾರಿಗಳ ದಂಡು ಕಟ್ಟಿಕೊಂಡು ಜನರ ಅಹವಾಲುಗಳನ್ನು ಸ್ವೀಕರಿಸಿದ್ದ ಕಂದಾಯ ಸಚಿವ ಆರ್.‌ಅಶೋಕ್ ರಾತ್ರಿ‌ ಮೊಸರನ್ನ ಊಟ ಮಾಡಿ ನಿದ್ದೆಗೆ ಜಾರಿದರು.

ಗ್ರಾಮದ ಸರ್ಕಾರಿ ಶಾಲೆ ಕೊಠಡಿಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ‌ಮಾಡಲಾಗಿದೆ.

ಮಧ್ಯಾಹ್ನ ಉತ್ತರ ಕರ್ನಾಟಕದ ರೊಟ್ಟಿ ಊಟ ಸಚಿವರಿಗೆ ತುಸು ಖಾರ ಎನಿಸಿತು. ಆದ್ದರಿಂದ ರಾತ್ರಿ ಮೊಸರನ್ನ ಸೇವಿಸಿದರು.

ADVERTISEMENT

ಸಚಿವರಿಗಾಗಿ ಕೊಠಡಿಯಲ್ಲಿ ಚಾಪೆ, ದಿಂಬು, ಏರ್ ಕೂಲರ್, ಪ್ಯಾನ್ ವ್ಯವಸ್ಥೆ ಮಾಡಲಾಗಿತ್ತು. ಮಲಗುವ ಮುನ್ನ ಗ್ರಾಮದ ಬೀದಿಯಲ್ಲಿ ವಾಕಿಂಗ್ ಮಾಡಿದರು. ಈ ವೇಳೆಯೂ ಜನ ಅಹವಾಲು ಸಲ್ಲಿಸಲು ಮುಗಿ ಬಿದ್ದರು.

ಸಚಿವರೊಂದಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ತಹಶೀಲ್ದಾರ್‌ಗಳು‌ ವಾಸ್ತವ್ಯ ಹೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.