ಗದಗ: ‘ಸಾಹಿತಿಗಳಿಗೆ ಸಾಮಾಜಿಕ ಜವಾಬ್ದಾರಿ ಹೆಚ್ಚಿರುತ್ತದೆ. ಸಮಾಜದ ಓರೆಕೋರೆಗಳನ್ನು ತನ್ನ ಕಾವ್ಯದ ಮೂಲಕ ತಿದ್ದುವ ಕಾರ್ಯವನ್ನು ಕವಿ ಮಾಡಬೇಕು. ಸಂಕಟಗಳನ್ನು ಕವಿತೆಗಳು ಧ್ವನಿಸಬೇಕು. ಈ ಹಿನ್ನೆಲೆಯಲ್ಲಿ ಬರಹಗಾರನಿಗೆ ಬದ್ಧತೆ ಮತ್ತು ಸಾಮಾಜಿಕ ಕಳಕಳಿ ಅಗತ್ಯ’ ಎಂದು ಹಿರಿಯ ಸಾಹಿತಿ ಡಿ.ವಿ. ಬಡಿಗೇರ ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕೆಎಲ್ಇ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವತಿಯಿಂದ ನಡೆದ ಜಿಲ್ಲಾ ಮಟ್ಟದ ದಸರಾ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
‘ಕನ್ನಡ ಕಾವ್ಯ ಪರಂಪರೆ ಶ್ರೀಮಂತವಾಗಿದ್ದು, ಇಂದಿನ ಕವಿಗಳು ಅದನ್ನು ಓದಿ ಅರ್ಥೈಸಿಕೊಳ್ಳುವ ಮೂಲಕ ತಮ್ಮ ಜ್ಞಾನ ವಿಸ್ತರಿಸಿಕೊಳ್ಳಬೇಕು. ಬಳಿಕ ಕವಿತೆಗಳನ್ನು ಬರೆದರೆ ಅದರ ಮೌಲ್ಯ ಹೆಚ್ಚುತ್ತದೆ’ ಎಂದರು.
ಕವಿಗೋಷ್ಠಿಯಲ್ಲಿ ಆರ್.ಎಸ್.ಪಾಟೀಲ, ಮಾಂತೇಶ ಅಕ್ಕೂರ, ಭುವನೇಶ್ವರಿ ಅಂಗಡಿ, ಐ.ಬಿ.ಒಂಟೇಲಿ, ಜಯಶ್ರೀ ಪಟ್ಟಣಶೆಟ್ಟಿ, ಕಳಕಪ್ಪ ಜಲ್ಲಿಗೇರಿ, ಎಸ್.ಎಸ್.ಪೂಜಾರ, ಶಿವಾನಂದ ಹುನಗುಂಡಿ, ಚೈತ್ರಾ ಯಾಳಗಿ, ಬಿ.ಎಸ್.ಹಿಂಡಿ, ವಿರುಪಮ್ಮ ಹಿರೇಮಠ, ಕಸ್ತೂರಿ ಕಡಗದ, ಈರಮ್ಮ ಕುಂದಗೋಳ, ಸ್ವರಾ ಬೀರನೂರ, ಮೇಘಾ ಬೆಳದಡಿ, ಹುಚ್ಚೀರಪ್ಪ ಈಟಿ, ವಿಶ್ವನಾಥ ಆದಿ, ನೀಲಪ್ಪ ಐಹೊಳಿ, ವಿಜಯಲಕ್ಷ್ಮಿ ಪಾಗದ, ಈರಣ್ಣ ಹೂಗಾರ, ಸಂತೋಷ ಚಿಜ್ಜೇರಿ, ಪ್ರೇಮಾ ಶಿರಹಟ್ಟಿ, ಯಶವಂತ ಬಿಷ್ಟಕ್ಕನವರ, ಅನ್ನಪೂರ್ಣ ಕುರಿ, ರುಕ್ಸಾರ್ ಕೊಪ್ಪಳ, ಜಿ.ಎನ್.ಪಾಟೀಲ, ವಿಜಯಲಕ್ಷ್ಮಿ ಬಂಡಿವಾಡ, ಸಂಗೀತಾ ಪೂಜಾರ, ಶ್ರುತಿ ಅಳಗೋಡಿ, ಪ್ರೇರಣಾ ಅಂಗಡಿ, ಲಕ್ಷ್ಮಿ ಕೆ., ನಿಖಿತಾ ಜೆ. ಕವನ ವಾಚಿಸಿದರು.
ಇದೇ ಸಂದರ್ಭದಲ್ಲಿ ಸಾಹಿತಿ ಡಿ.ವಿ.ಬಡಿಗೇರ ಅವರನ್ನು ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.
ಅಂದಯ್ಯ ಅರವಟಗಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಡಿ.ಎಸ್.ಬಾಪುರಿ ವಂದಿಸಿದರು.
ಸಾಹಿತಿ ಜನಪರ ಮತ್ತು ಜೀವಪರ ಆಶಯಗಳನ್ನು ಇಟ್ಟುಕೊಂಡು ಬರವಣಿಗೆಯಲ್ಲಿ ತೊಡಗಬೇಕು. ಪ್ರಜಾಪ್ರಭುತ್ವ ಮೌಲ್ಯಗಳನ್ನು ಕವಿ ಮತ್ತು ಕಾವ್ಯ ಒಳಗೊಂಡಿರಬೇಕು. ಧಾವಂತದಲ್ಲಿ ಸೃಷ್ಟಿಸುವ ಕಾವ್ಯ ಬಹುಕಾಲ ನಿಲ್ಲುವುದಿಲ್ಲವಿವೇಕಾನಂದಗೌಡ ಪಾಟೀಲ ಅಧ್ಯಕ್ಷ ಜಿಲ್ಲಾ ಕಸಾಪ
ಇಂದಿನ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಸಂಸ್ಕೃತಿ ಕುರಿತಾಗಿ ಆಸಕ್ತಿ ಕಡಿಮೆಯಾಗುತ್ತಿದ್ದು ಇಂತಹ ಕಾರ್ಯಕ್ರಮಗಳು ಸೃಜನಶೀಲ ಅಭಿವ್ಯಕ್ತಿ ಪ್ರೇರಣೆ ಒದಗಿಸುತ್ತವೆಎ.ಕೆ.ಮಠ ಪ್ರಾಂಶುಪಾಲ ಕೆಎಲ್ಇ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.