ADVERTISEMENT

ಹೊಳೆನರಸೀಪುರದಲ್ಲಿ ಗಮನಸೆಳೆದ ರಾಗಿ ಮುದ್ದೆ ಉನ್ನುವ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2025, 13:52 IST
Last Updated 24 ಫೆಬ್ರುವರಿ 2025, 13:52 IST
ಶಿವರಾತ್ರಿ ಅಂಗವಾಗಿ ಹೊಳೆನರಸೀಪುರದಲ್ಲಿ ಸೋಮವಾರ ವೈಷ್ಣವಿ ಚಾರಿಟಬಲ್ ಟ್ರಸ್ಟ್ ಸೋಮವಾರ ಏರ್ಪಡಿಸಿದ್ದ ರಾಗಿ ಮುದ್ದೆ ಊಟ ಮಾಡುವ ಸ್ಪರ್ಧೆಯಲ್ಲಿ ಮಹಿಳೆಯರು ಆಸಕ್ತಿಯಿಂದ ಭಾಗವಹಿಸಿದ್ದರು
ಶಿವರಾತ್ರಿ ಅಂಗವಾಗಿ ಹೊಳೆನರಸೀಪುರದಲ್ಲಿ ಸೋಮವಾರ ವೈಷ್ಣವಿ ಚಾರಿಟಬಲ್ ಟ್ರಸ್ಟ್ ಸೋಮವಾರ ಏರ್ಪಡಿಸಿದ್ದ ರಾಗಿ ಮುದ್ದೆ ಊಟ ಮಾಡುವ ಸ್ಪರ್ಧೆಯಲ್ಲಿ ಮಹಿಳೆಯರು ಆಸಕ್ತಿಯಿಂದ ಭಾಗವಹಿಸಿದ್ದರು   

ಹೊಳೆನರಸೀಪುರ: ಪಟ್ಟಣದ ಗಣಪತಿ ಪೆಂಡಾಲ್ ಮುಂಭಾಗ ಸೋಮವಾರ ಏರ್ಪಡಿಸಿದ್ದ ಮುದ್ದೆ ಹಾಗೂ ಹುರುಳಿಸಾರು ಉಣ್ಣುವ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಹುಲಿವಾಲದ ರಾಮೇಗೌಡ 5 ನಿಮಿಷದಲ್ಲಿ 250 ಗ್ರಾಂ ತೂಕದ ಆರೂವರೆ (1,625 ಗ್ರಾಂ) ಮುದ್ದೆ ಮುರಿದು ಪ್ರಥಮ ಸ್ಥಾನ ಗಳಿಸಿದರು. ಮಹಿಳೆಯರ ವಿಭಾಗದಲ್ಲಿ ಕಲ್ಲುಬ್ಯಾಡರಹಳ್ಳಿಯ ಪದ್ಮಾವತಿ 250 ಗ್ರಾಂ ತೂಕದ 6 ಮುದ್ದೆ (1,500 ಗ್ರಾಂ) ಉಂಡು ಮೊದಲಿಗರಾದರು. ತಲಾ ₹ 5 ಸಾವಿರ ನಗದು ಬಹುಮಾನ ಪಡೆದರು.

ಪಟ್ಟಣದ ವೈಷ್ಣವಿ ಚಾರಿಟಬಲ್ ಟ್ರಸ್ಟ್‌ಯಿಂದ ಏರ್ಪಡಿಸಿದ್ದ 5 ನಿಮಿಷ ರಾಗಿ ಮುದ್ದೆ, ಹುರಳಿಸಾರು ಬೆಣ್ಣೆಜೊತೆ ಊಟ ಮಾಡುವ ಸ್ಪರ್ಧೆ ಸಾರ್ವಜನಿಕರ ಆಸಕ್ತಿ ಕೆರಳಿಸಿತ್ತು. ಪ್ರತ್ಯೇಕ ನಡೆದ ಸ್ಪರ್ಧೆಯಲ್ಲಿ  6 ಜನ ಪುರುಷರು 8 ಜನ ಮಹಿಳೆಯರು ಭಾಗವಹಿಸಿದ್ದರು.

ಹುಚ್ಚನಕೊಪ್ಪಲು ಮಹೇಶ ಐದೂವರೆ ಮುದ್ದೆ ಉಂಡು ದ್ವಿತೀಯ ಬಹುಮಾನ ಗಳಿಸಿದರು. ಪಟ್ಟಣದ ವಿನುತಾ 4 ಮುದ್ದೆ ಉಂಡು ದ್ವಿತೀಯ ಬಹುಮಾನ ಗಳಿಸಿ ₹ 3 ಸಾವಿರ ಪಡೆದರು.

ADVERTISEMENT

ಮೊದಲೆರೆಡು ಸ್ಥಾನ ಪಡೆದ ಮಹಿಳೆಯರಿಗೆ ನಗದು ಜೊತೆಗೆ ರೇಣುಕೇಶ್ ಸೀರೆಗಳನ್ನು ಬಹುಮಾನವಾಗಿ ನೀಡಿದರು.

ಟ್ರಸ್ಟಿನ ಕಿಟ್ಟಿ, ಕಾಮಾಕ್ಷಿ, ಸುದರ್ಶನ್ ಬಾಬು, ಅಶೋಕ್, ಈಶ್ವರ್, ಹರಿಣಾಕ್ಷಿ, ಕುಮುದಾ, ಮಂಜುಳಾ, ರವೀಶ, ಲಕ್ಷ್ಮೀ ಇತರರು ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.