ADVERTISEMENT

PHOTOS | ಹಾವೇರಿ: ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ, ನುಡಿಜಾತ್ರೆಗೆ ಕಲಾತಂಡಗಳ ಮೆರುಗು

ಯಾಲಕ್ಕಿ ಕಂಪಿನ ನಗರಿ, ಸರ್ವ ಧರ್ಮಗಳ ಸಾಮರಸ್ಯದ ಬೀಡು ಹಾವೇರಿಯಲ್ಲಿ ಜ.6 ರಿಂದ ಜ.8 ರವರೆಗೆ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಷ್ಟ್ರ, ನಾಡ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ಮಾಡುವುದರ ಮೂಲಕ ಚಾಲನೆ ನೀಡಲಾಯಿತು.‘ಸಂತ ಶರಣರ ನಾಡು– ಭಾವೈಕ್ಯದ ಬೀಡು’ ಎಂದೇ ಹೆಸರಾದ ಹಾವೇರಿಯು ಪ್ರತ್ಯೇಕ ಜಿಲ್ಲೆಯಾಗಿ ರೂಪುಗೊಂಡ 25 ವರ್ಷಗಳ ನಂತರ ಮೊದಲ ಬಾರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯವನ್ನು ವಹಿಸಿಕೊಂಡಿದೆ. ‘ಸಾಮರಸ್ಯದ ಭಾವ– ಕನ್ನಡದ ಜೀವ’ ಈ ಬಾರಿಯ ಘೋಷವಾಕ್ಯವಾಗಿದೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ದೊಡ್ಡರಂಗೇಗೌಡ ಅವರು ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿದ್ದಾರೆ.

​ಪ್ರಜಾವಾಣಿ ವಾರ್ತೆ
Published 6 ಜನವರಿ 2023, 4:09 IST
Last Updated 6 ಜನವರಿ 2023, 4:09 IST
ಹಾವೇರಿ ನಗರದಲ್ಲಿ ಶುಕ್ರವಾರ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭಗೊಂಡಿತು.
ಹಾವೇರಿ ನಗರದಲ್ಲಿ ಶುಕ್ರವಾರ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭಗೊಂಡಿತು.   
ಸಮ್ಮೇಳನಾಧ್ಯಕ್ಷರ ರಥದಲ್ಲಿ ಡಾ.ದೊಡ್ಡರಂಗೇಗೌಡ ಆಸೀನರಾದ ಕ್ಷಣ
ಪುನೀತ್ ಭಾವಚಿತ್ರ ಹಿಡಿದು ಸಾಗಿದ ಕನ್ನಡ ಅಭಿಮಾನಿ
ಕಲಾತಂಡಗಳ ನೃತ್ಯ ಪ್ರದರ್ಶನ
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಝಾಂಜ್ ಮೇಳ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲಂಬಾಣಿ ನೃತ್ಯ ತಂಡ
ಹಾವೇರಿ ಜಿಲ್ಲೆಯ ಡೊಳ್ಳು ವಾದ್ಯ
ಧಾರವಾಡ ಜಿಲ್ಲೆಯ ಜಗ್ಗಲಗಿ ಮೇಳದ ಸೊಬಗು
ಕಲಾತಂಡಗಳ ಮೆರುಗು
ಚಿತ್ರದುರ್ಗದ ಬೇಡರ ಪಡೆ
ಕಲಾತಂಡಗಳ ಮೆರುಗು
ಭಟ್ಕಳದ ಚೆಂಡೆ ವಾದ್ಯ
ಕನ್ನಡ ಬಾವುಟ ಹಿಡಿದು ಸಾಗಿದ ಮಕ್ಕಳು
ಕನ್ನಡ ಬಾವುಟ ಹಿಡಿದು ಸಾಗಿದ ಮಕ್ಕಳು
ಹಾನಗಲ್‌ನ ಛತ್ರಿ ಚಾಮರ ತಂಡ ಸಮ್ಮೇಳನಾಧ್ಯಕ್ಷರ ಭಾವಚಿತ್ರ ಹಿಡಿದು ಸಾಗಿತು
ಸವಣೂರಿನ ನಂದಿ ಧ್ವಜ ಕುಣಿತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.