ADVERTISEMENT

ಕಲಬುರ್ಗಿ: ಕಳ್ಳತನ ಮಾಡಿದ್ದ ಹಣ ಬಿಟ್ಟು ಕಾಲ್ಕಿತ್ತ ವ್ಯಕ್ತಿ!

​ಪ್ರಜಾವಾಣಿ ವಾರ್ತೆ
Published 21 ಜುಲೈ 2021, 7:00 IST
Last Updated 21 ಜುಲೈ 2021, 7:00 IST
ಕಲಬುರ್ಗಿ ಜಿಲ್ಲೆ ಲಾಡ್ಲಾಪುರದ ಹಾಜಿಸರ್ವರ್ ದರ್ಗಾ
ಕಲಬುರ್ಗಿ ಜಿಲ್ಲೆ ಲಾಡ್ಲಾಪುರದ ಹಾಜಿಸರ್ವರ್ ದರ್ಗಾ   

ಕಲಬುರ್ಗಿ: ಜಿಲ್ಲೆಯ ವಾಡಿ ಸಮೀಪದ‌ ಲಾಡ್ಲಾಪುರದ ಹಾಜಿ ಸರ್ವರ್ ದರ್ಗಾದ‌ಲ್ಲಿದ್ದ ಹಣ‌‌ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ಗ್ರಾಮಸ್ಥರು ಹಿಡಿಯಲು ಹೋದಾಗ ‌ಹಣ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾನೆ.

ಹಣ ಕಳ್ಳತನ ಮಾಡಿಕೊಂಡು ಹಲಕರ್ಟಿ ಗ್ರಾಮದ ‌ಮೂಲಕ ಓಡಿ ಹೋಗುತ್ತಿದ್ದ ವ್ಯಕ್ತಿಯನ್ನು ಗ್ರಾಮಸ್ಥರು ಹಿಡಿಯಲು ಹೋದರು. ಇದರಿಂದ ಗಾಬರಿಯಾದ ವ್ಯಕ್ತಿ ಹಣವನ್ನು ‌ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾನೆ.

ಘಟನಾ ಸ್ಥಳಕ್ಕೆ ಡಿವೈಎಸ್ಪಿ ಉಮೇಶ ಚಿಕ್ಕಮಠ, ವಾಡಿ ಪಿಎಸ್ಐ ವಿಜಯಕುಮಾರ ಭಾವಗಿ ಭೇಟಿ ಆರೋಪಿ ಪತ್ತೆಗೆ ಮುಂದಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.