ಮಡಿಕೇರಿ: ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಅಕ್ಟೋಬರ್ 17ರಂದು ಸಂಜೆ 7.21ಕ್ಕೆ ಮೇಷ ಲಗ್ನದಲ್ಲಿ ಕಾವೇರಿ ತೀರ್ಥೋದ್ಭವವಾಗಲಿದೆ.
ಈವರೆಗೆ ಬೆಳಿಗ್ಗೆ ಆಗುತ್ತಿದ್ದ ತೀರ್ಥೋದ್ಭವ ಈ ಬಾರಿ ಸಂಜೆ ಆಗುತ್ತಿರುವುದು ವಿಶೇಷ.
ಸೆ.27ರಿಂದ ಆರಂಭವಾಗುವ ತುಲಾ ಸಂಕ್ರಮಣದ ಧಾರ್ಮಿಕ ಕಾರ್ಯಕ್ರಮಗಳು ಅ.17ರಂದು ಕೊನೆಗೊಳ್ಳಲಿದೆ. ಮಡಿಕೇರಿ ದಸರಾ ಉತ್ಸವ ಸೆ.26ರಂದು ನಾಲ್ಕು ಶಕ್ತಿ ದೇವತೆಗಳ ಕರಗದ ಮೆರವಣಿಗೆ ಮೂಲಕ ಆರಂಭವಾಗಲಿದೆ.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ನೇತೃತ್ವದ ಸಭೆಯಲ್ಲಿಈ ಕುರಿತು ಚರ್ಚೆ ನಡೆದು ಅನುಮೋದನೆ ನೀಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.