ಕುಶಾಲನಗರ: ಕೊಡಗು ಸೈನಿಕ ಶಾಲೆಯ 23 ವಿದ್ಯಾರ್ಥಿಗಳು 2025ರ ಸೆ. 14ರಂದು ನಡೆದ ಯುಪಿಎಸ್ಸಿ ಎನ್ಡಿಎ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ಜೀತ್ ಸಿಂಗ್ ಅವರ ಅವಿರತ ಪ್ರಯತ್ನ ಸಾಕಾರವಾಗಿದೆ. ಅವರ ಮಾರ್ಗದರ್ಶನದಲ್ಲಿ ರೂಪುಗೊಂಡ ಸಮಗ್ರ ಕಾರ್ಯಯೋಜನೆಯನ್ನು ಉಪಪ್ರಾಂಶುಪಾಲ ವಿಂಗ್ ಕಮಾಂಡರ್ ಮೊಹಮ್ಮದ್ ಷಾಜಿ, ಹಿರಿಯ ಶಿಕ್ಷಕ ವಿಬಿನ್ ಕುಮಾರ್, ಎನ್ಡಿಎ ಮೇಲ್ವಿಚಾರಕ ಸಂಜೀವ್ ಕಿರಣ್ ಹಾಗೂ ಸಮರ್ಪಿತ ಶಿಕ್ಷಕ ಸುರೇಶ್, ರಮೇಶ್, ಶ್ರೀಲೇಖಾ ವಿ.ಎಸ್. ರಾಜಗೋಲ್ಕರ್, ಅಶೋಕನ್, ದಾದಾ ಕುಸನಾಲೆ ಹಾಗೂ ಅಶೋಕ್ ವೈ. ಕೆಂಗಾರೆ ಅವರ ಪರಿಶ್ರಮದಿಂದ ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ.
ಈ ವಿದ್ಯಾರ್ಥಿಗಳು ಈ ವರ್ಷ ದೇಶದ ವಿವಿಧ ಭಾಗಗಳಲ್ಲಿ ನಡೆಯಲಿರುವ ಸೇವಾ ಆಯ್ಕೆ ಮಂಡಳಿಯ (ಎಸ್ಎಸ್ಬಿ) ಸಂದರ್ಶನಗಳಲ್ಲಿ ಹಾಜರಾಗಲಿದ್ದಾರೆ. ಪ್ರಾಂಶುಪಾಲ ಕರ್ನಲ್ ಅಮರ್ಜೀತ್ ಸಿಂಗ್ ಅವರು ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.