ಮಂಡ್ಯ: ‘ಧರ್ಮಸ್ಥಳ ವಿರುದ್ಧದ ಷಡ್ಯಂತ್ರಕ್ಕೆ ಕೈಜೋಡಿಸುವ ಯೂಟ್ಯೂಬರ್ಗಳಿಗೆ ಫಂಡಿಂಗ್ ಆಗಿದೆ. ನನಗೂ ಆಫರ್ ಬಂದಿತ್ತು’ ಎಂದು ಮದ್ದೂರು ತಾಲ್ಲೂಕಿನ ಯೂಟ್ಯೂಬರ್ ಸುಮಂತ್ ಆರೋಪಿಸಿದ್ದಾರೆ.
ಶುಕ್ರವಾರ ಇಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡುತ್ತಾ, ‘ಸೌಜನ್ಯ ಪರ ಹೋರಾಟದ ಹೆಸರಲ್ಲಿ ಈ ಎರಡು ವರ್ಷಗಳ ಹಿಂದೆ ಪ್ಲಾನ್ ಮಾಡಿದ್ದಾರೆ. ನಾನು ಷಡ್ಯಂತ್ರವನ್ನು ತಿಳಿದು ಆಫರ್ ನಿರಾಕರಿಸಿದ್ದೆ. ಯೂಟ್ಯೂಬರ್ಗಳಿಗೆ ಆಮಿಷ ಒಡ್ಡಿದವರ ಬಗ್ಗೆ ಎಸ್ಐಟಿ ತನಿಖೆ ನಡೆಸಲಿ’ ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.