ADVERTISEMENT

ಮಳವಳ್ಳಿ: ಇಬ್ಬರು ಮನೆಗಳ್ಳರ ಬಂಧನ

​ಪ್ರಜಾವಾಣಿ ವಾರ್ತೆ
Published 2 ಜುಲೈ 2023, 13:35 IST
Last Updated 2 ಜುಲೈ 2023, 13:35 IST
ಮಳವಳ್ಳಿ ಪಟ್ಟಣ ಹಾಗೂ ವಿವಿಧೆಡೆ ಮನೆಗಳ ಬೀಗ ಹೊಡೆದು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಮಳವಳ್ಳಿ ಪೊಲೀಸರು ಯಶ್ವಸಿಯಾಗಿದ್ದಾರೆ. ಡಿವೈಎಸ್ಪಿ ಎನ್.ನವೀನ್ ಕುಮಾರ್, ಶ್ರೀಧರ್, ವಿ.ಸಿ.ಅಶೋಕ್ ಇದ್ದಾರೆ.
ಮಳವಳ್ಳಿ ಪಟ್ಟಣ ಹಾಗೂ ವಿವಿಧೆಡೆ ಮನೆಗಳ ಬೀಗ ಹೊಡೆದು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಮಳವಳ್ಳಿ ಪೊಲೀಸರು ಯಶ್ವಸಿಯಾಗಿದ್ದಾರೆ. ಡಿವೈಎಸ್ಪಿ ಎನ್.ನವೀನ್ ಕುಮಾರ್, ಶ್ರೀಧರ್, ವಿ.ಸಿ.ಅಶೋಕ್ ಇದ್ದಾರೆ.   

ಮಳವಳ್ಳಿ: ಜನರಿಲ್ಲದ ವೇಳೆ ಮನೆಗಳ ಬೀಗ ಒಡೆದು ಚಿನ್ನಾಭರಣ ಹಾಗೂ ನಗದು ಕಳವು ಮಾಡುತ್ತಿದ್ದ ಆರೋಪದಲ್ಲಿ ಇಬ್ಬರನ್ನು  ಮಳವಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಡಿ.ಮಂಜುನಾಥ್(41) ಮತ್ತು ಟಿ.ಎಲ್.ರವಿಕುಮಾರ್(37) ಬಂಧಿತರು. ಆರೋಪಿಗಳು ಕಾರಿನಲ್ಲಿ ಬಂದು ಪಟ್ಟಣ ಹಾಗೂ ವಿವಿಧೆಡೆ ಯಾರೂ ಇಲ್ಲದ ಮನೆಗಳನ್ನು ಗುರುತಿಸಿಕೊಂಡು ರಾತ್ರಿ ವೇಳೆ ಬೀಗ ಒಡೆದು ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗುತ್ತಿದ್ದರು.  ಕೆಲ ತಿಂಗಳ ಹಿಂದೆ ಪಟ್ಟಣದ ಹಾಗೂ ಕಿರುಗಾವಲು ಪೊಲೀಸ್ ಠಾಣೆಗಳಲ್ಲಿ ಕಳವು ಪ್ರಕರಣ ದಾಖಲಾಗಿದ್ದವು.

ಬಂಧಿತರಿಂದ 190 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಚಿನ್ನಾಭರಣಗಳನ್ನು ಆರೋಪಿ ರವಿಕುಮಾರ್ ಸಹೋದರಿ ಮಂಜುಳಾ ಮೂಲಕ ಮಾರಾಟ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.
ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,  ಆರೋಪಿಗಳಿಗೆ ಕೋರ್ಟ್‌  ನ್ಯಾಯಾಂಗ ಬಂಧನ ನೀಡಿದೆ.

ಸಿಪಿಐ ಶ್ರೀಧರ್, ಪಿಎಸ್ಐ ವಿ.ಸಿ.ಅಶೋಕ್, ಸಿಬ್ಬಂದಿ ರಿಯಾಜ್ ಪಾಷ, ನಾಗೇಂದ್ರ, ಪ್ರೇಮ್ ಕುಮಾರ್, ಸಿದ್ದರಾಜು ಅವರ ತಂಡ ಕಾರ್ಯಾಚರಣೆ ನಡೆಸಿತ್ತು.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡಿವೈಎಸ್ಪಿ ಎನ್.ನವೀನ್ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT