ADVERTISEMENT

ಮೈಸೂರಿನಲ್ಲಿ ಕೋಳಿ ಬಲಿ ಕೊಟ್ಟು ವಾಮಾಚಾರ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 4:42 IST
Last Updated 4 ಏಪ್ರಿಲ್ 2019, 4:42 IST
   

ಮೈಸೂರು: ಮೈಸೂರಿನ ಕಲಾಮಂದಿರದ ಎದುರು ಮೂರು ರಸ್ತೆಗಳು ಸೇರುವಂತಹ ಸ್ಥಳದಲ್ಲಿ ಅಮವಾಸ್ಯೆಗೂಮುನ್ನ ದಿನ ಕೋಳಿಯೊಂದನ್ನು ಬಲಿ ಕೊಟ್ಟು ವಾಮಾಚಾರ ನಡೆಸಲಾಗಿದೆ.

ಗುರುವಾರ ಬೆಳಿಗ್ಗೆ ಜನರು ಇದನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದರು.ಈ ಪ್ರದೇಶದಲ್ಲಿ ತಡರಾತ್ರಿ ಜನ ಸಂಚಾರ ತೀರಾ ಕಡಿಮೆ ಇರುತ್ತದೆ.ಗುರುವಾರ ನಸುಕಿನಲ್ಲಿ ವಾಮಾಚಾರ ನಡೆಸಿರಬಹುದು ಎನ್ನುವ ಶಂಕೆಯನ್ನು ಜನ ವ್ಯಕ್ತಪಡಿಸಿದ್ದಾರೆ.

ಈ ಪ್ರದೇಶಕ್ಕೆ ಸಮೀಪವಾಗಿ ಯಾವುದೇ ರಾಜಕಾರಣಿಗಳ ಮನೆಗಳು ಇಲ್ಲ.ಆದರೆ,ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತರ ನಿವಾಸಗಳು ಈ ಸ್ಥಳಕ್ಕೆ ಹತ್ತಿರವಾಗಿವೆ.

ADVERTISEMENT

ಲೋಕಸಭೆ ಚುನಾವಣೆ ಭರಾಟೆ ಹೆಚ್ಚಾಗುತ್ತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಮೊದಲ ಹಂತದಮತದಾನ ನಡೆಯಲಿದೆ. ಮೈಸೂರು ಲೋಕಸಭಾ ಕ್ಷೇತ್ರದಲ್ಲಿಯೂ ಏಪ್ರಿಲ್‌ 18ಕ್ಕೆ ಮತದಾನ ನಡೆದಲಿದೆ. ಈ ವೇಳೆ ವಾಮಾಚಾರದಂತಹ ಘಟನೆ ಬೆಳಕಿಗೆ ಬಂದಿರುವುದು ಅನೇಕರಲ್ಲಿ ಆತಂಕ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.