ADVERTISEMENT

ಬದನವಾಳು ಖಾದಿ ಕೇಂದ್ರವು ಸಾಬರಮತಿ ಆಶ್ರಮ ಮಾದರಿಯಲ್ಲಿ ಅಭಿವೃದ್ಧಿ

₹1 ಕೋಟಿ ವೆಚ್ಚದಲ್ಲಿ ಕಾಂಪೌಂಡ್ ಕಾಮಗಾರಿ ಪ್ರಗತಿ: ಬಿ.ಹರ್ಷವರ್ಧನ್‌

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 3:53 IST
Last Updated 3 ಅಕ್ಟೋಬರ್ 2021, 3:53 IST
ನಂಜನಗೂಡಿನ ಮಿನಿ ವಿಧಾನಸೌಧದಲ್ಲಿ ಶನಿವಾರ ಗಾಂಧಿ, ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಯಂತಿ ನಡೆಯಿತು. ಬಿ.ಹರ್ಷವರ್ಧನ್‌, ಭೈರಯ್ಯ, ಎಚ್.ಎಸ್.ಮಹದೇವಸ್ವಾಮಿ, ಮೀನಾಕ್ಷಿ, ಹೊರಳವಾಡಿ ಮಹೇಶ್, ಕುಂಬರಳ್ಳಿ ಸುಬ್ಬಣ್ಣ ಇದ್ದರು (ಎಡಚಿತ್ರ). ನಂಜನಗೂಡಿನಲ್ಲಿ ತಾಲ್ಲೂಕು ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀಕಂಠಯ್ಯ ಹಾಗೂ ಕಳಲೆ ಗುರುಸ್ವಾಮಿ ಅವರನ್ನು ಸನ್ಮಾನಿಸಲಾಯಿತು
ನಂಜನಗೂಡಿನ ಮಿನಿ ವಿಧಾನಸೌಧದಲ್ಲಿ ಶನಿವಾರ ಗಾಂಧಿ, ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಯಂತಿ ನಡೆಯಿತು. ಬಿ.ಹರ್ಷವರ್ಧನ್‌, ಭೈರಯ್ಯ, ಎಚ್.ಎಸ್.ಮಹದೇವಸ್ವಾಮಿ, ಮೀನಾಕ್ಷಿ, ಹೊರಳವಾಡಿ ಮಹೇಶ್, ಕುಂಬರಳ್ಳಿ ಸುಬ್ಬಣ್ಣ ಇದ್ದರು (ಎಡಚಿತ್ರ). ನಂಜನಗೂಡಿನಲ್ಲಿ ತಾಲ್ಲೂಕು ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀಕಂಠಯ್ಯ ಹಾಗೂ ಕಳಲೆ ಗುರುಸ್ವಾಮಿ ಅವರನ್ನು ಸನ್ಮಾನಿಸಲಾಯಿತು   

ನಂಜನಗೂಡು: ‘ತಾಲ್ಲೂಕಿನ ಬದನವಾಳು ಖಾದಿ ಗ್ರಾಮೋದ್ಯೋಗ ಕೇಂದ್ರವನ್ನು ಗುಜರಾತಿನ ಸಾಬರಮತಿ ಆಶ್ರಮದ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು’ ಎಂದು ಶಾಸಕ ಬಿ.ಹರ್ಷವರ್ಧನ್ ತಿಳಿಸಿದರು.

ನಗರದ ಮಿನಿ ವಿಧಾನಸೌಧದಲ್ಲಿ ಶನಿವಾರ ನಡೆದ ಗಾಂಧಿ, ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಯಂತಿಯಲ್ಲಿ ಅವರು ಮಾತನಾಡಿದರು.

‘ಬದನವಾಳು ಖಾದಿ ಕೇಂದ್ರಕ್ಕೆ ಗಾಂಧಿ 2 ಬಾರಿ ಬಂದು ಹೋಗಿದ್ದರು. ಇಲ್ಲಿಗೆ 1927ರಲ್ಲಿ ಭೇಟಿ ಕೊಟ್ಟಿದ್ದರು. ಇಲ್ಲಿ ₹1 ಕೋಟಿ ವೆಚ್ಚದಲ್ಲಿ ಕಾಂಪೌಂಡ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಯೋಗ, ಜ್ಞಾನ ಕೇಂದ್ರ ಸ್ಥಾಪನೆ, ಪ್ರವಾಸಿಗರಿಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದು’ ಎಂದರು.

ADVERTISEMENT

ಉಪ ತಹಶೀಲ್ದಾರ್‌ ಭೈರಯ್ಯ, ನಗರಸಭೆ ಅಧ್ಯಕ್ಷ ಎಚ್.ಎಸ್.ಮಹದೇವಸ್ವಾಮಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಹೊರಳವಾಡಿ ಮಹೇಶ್, ಮುಖಂಡರಾದ ಕುಂಬರಳ್ಳಿ ಸುಬ್ಬಣ್ಣ, ಚಿಕ್ಕರಂಗನಾಯ್ಕ, ಮಹದೇವಪ್ಪ, ಶಿವಣ್ಣ, ಶ್ರೀಕಂಠ, ಶಿವಣ್ಣ ಇದ್ದರು.

ಪಾದಯಾತ್ರೆ
ನಂಜನಗೂಡು ನಗರದಲ್ಲಿ ತಾಲ್ಲೂಕು ಕಾಂಗ್ರೆಸ್ ಪಕ್ಷದಿಂದ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಪ್ರಯುಕ್ತ ಶನಿವಾರ ನಗರದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ನಡೆಸಲಾಯಿತು.

ಮಾಜಿ ಶಾಸಕ ಕಳಲೆ ಕೇಶವ ಮೂರ್ತಿ ಮಾತನಾಡಿ, ‘ಗಾಂಧಿಯ ತತ್ವ ಆದರ್ಶಗಳನ್ನು ದೇಶದ ಯುವ ಜನತೆ ಮೈಗೂಡಿಸಿಕೊಳ್ಳಬೇಕು’ ಎಂದರು.

ಸ್ವಾತಂತ್ರ್ಯ ಹೋರಾಟಗಾರ ಶ್ರೀಕಂಠಯ್ಯ, ಸಾಹಿತಿ ಕಳಲೆ ಗುರುಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ತಾಲ್ಲೂಕು ಅಧ್ಯಕ್ಷ ಕುರಹಟ್ಟಿ ಮಹೇಶ್, ಮುಖಂಡರಾದ ಶ್ರೀಕಂಠ ನಾಯಕ್, ಸೋಮೇಶ್, ಅಕ್ಬರ್ ಅಲೀಂ, ಗಂಗಾಧರ, ವಕೀಲ ಮಹೇಶ್, ಗಾಯತ್ರಿ, ಸೌಭಾಗ್ಯ, ಪುಷ್ಪಲತಾ, ಮುದ್ದುಮಾದಶೆಟ್ಟಿ, ಹಗಿನವಾಳು ಕೆಂಡಗಣ್ಣಪ್ಪ, ದೇವರಸನಹಳ್ಳಿ ಚೆಲುವಪ್ಪ, ಮುಖಂಡರಾದ ಹುರಾ ಮಾರುತಿ, ಶ್ರೀನಿವಾಸಮೂರ್ತಿ, ನಾಗೇಶ್‌ ರಾಜ್, ಚಿನ್ನಂಬಳ್ಳಿ ರಾಜು, ಗುರುಮಲ್ಲಪ್ಪ, ಬಸವಣ್ಣ, ಶಿವಪ್ಪದೇವರು, ಮಡುವಿನಹಳ್ಳಿ ಶಂಕರಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.