ADVERTISEMENT

ನಿರ್ಗಮಿಸುವುದಕ್ಕೂ ಮುನ್ನ ವಿಚಲಿತರಾಗಿದ್ದ ಈಶ್ವರಪ್ಪ?

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 8:36 IST
Last Updated 13 ಏಪ್ರಿಲ್ 2022, 8:36 IST
ಸಚಿವ ಕೆ.ಎಸ್.ಈಶ್ವರಪ್ಪ
ಸಚಿವ ಕೆ.ಎಸ್.ಈಶ್ವರಪ್ಪ   

ಮೈಸೂರು: ಇಲ್ಲಿನ ಲಲಿತಮಹಲ್‌ ಹೋಟೆಲ್‌ನಲ್ಲಿದ್ದ ಸಚಿವ ಕೆ.ಎಸ್.ಈಶ್ವರಪ್ಪ ಅವರು ಬುಧವಾರ ನಿರ್ಗಮಿಸುವುದಕ್ಕೆ ಮುನ್ನ ಹೋಟೆಲ್‌ನ ಆವರಣದಲ್ಲಿ ವಿಚಲಿತರಾದವರಂತೆ ಅತ್ತಿಂದಿತ್ತ ಏಕಾಂಗಿಯಾಗಿ ಓಡಾಡಿದರು.

‘ಮೊಬೈಲ್ ಕರೆ ಬಂದಾಗ ಅವರು ಹೋಟೆಲ್‌ನಲ್ಲಿ ನಡೆಯುತ್ತಿದ್ದ ಕೋರ್‌ ಸಮಿತಿ ಸಭೆಯಿಂದ ಹೊರ ಬಂದ ಅವರು ಒಳ ಆವರಣದಲ್ಲೂ ನಿಲ್ಲದೇ, ಹೋಟೆಲ್‌ನ ಬೇರೆ ಯಾವುದೇ ಕೊಠಡಿಗೂ ಹೋಗದೇ ಹೋಟೆಲ್‌ನ ಹೊರ ಆವರಣಕ್ಕೆ ಬಂದು ಮೊಬೈಲ್‌ನಲ್ಲಿ ಸಾಕಷ್ಟು ಹೊತ್ತು ಮಾತನಾಡಿದ್ದಾರೆ.

ಇದು ಕೇವಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕರೆ ಮಾತ್ರವಲ್ಲ ಇದರೊಂದಿಗೆ ಪಕ್ಷದ ಹೈಕಮಾಂಡ್‌ನ ಕರೆಯೂ ಇದ್ದಿರಬೇಕು. ರಹಸ್ಯವಾಗಿ ಮಾತನಾಡುವ ಸಲುವಾಗಿಯೇ ಅವರು ಹೋಟೆಲ್‌ನ ಹೊರ ಆವರಣಕ್ಕೆ ಬಂದಿದ್ದರು’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.