ADVERTISEMENT

ಪೌರತ್ವ ಕಾಯ್ದೆ ಪರ ಇರುವವರು ನಗರ ಭಯೋತ್ಪಾದಕರು: ಮಹೇಶ್‌ ಚಂದ್ರಗುರು

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 13:57 IST
Last Updated 23 ಡಿಸೆಂಬರ್ 2019, 13:57 IST
ಮಹೇಶ್‌ ಚಂದ್ರಗುರು
ಮಹೇಶ್‌ ಚಂದ್ರಗುರು   

ಮೈಸೂರು: ಪೌರತ್ವ (ತಿದ್ದುಪಡಿ) ಕಾಯ್ದೆಯ ಪರ ಇರುವವರು ನಗರ ಭಯೋತ್ಪಾದಕರು ಎಂದು ನಿವೃತ್ತ ಪ್ರಾಧ್ಯಾಪಕ ಮಹೇಶ್‌ಚಂದ್ರಗುರು ಟೀಕಿಸಿದರು.

ಪ್ರಜಾಪ್ರಭುತ್ವವನ್ನು ಈ ಭಯೋತ್ಪಾದಕರು ಹಾಳು ಮಾಡುತಿದ್ದಾರೆ. ಇದು ಆರ್ಯನ್ನರು ಮತ್ತು ದ್ರಾವಿಡರ ಮಧ್ಯದ ಕದನವಾಗಿದೆ ಎಂದು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ವ್ಯಾಖ್ಯಾನಿಸಿದರು.

ಕಾಯ್ದೆಯ ವಿರುದ್ಧ ಹೋರಾಡಿದವರ ಕುರಿತು ಸಂಸದ ತೇಜಸ್ವಿ ಸೂರ್ಯ ಕಳಪೆಯಾಗಿ ಮಾತನಾಡಿದ್ದಾರೆ. ಇವರಿಗೆ ತೇಜಸ್ವಿ ಬದಲು ಅಮಾವಾಸೆಯ ಕತ್ತಲೆ ಎಂದು ಹೆಸರಿಡಬೇಕು ಎಂದು ವ್ಯಂಗ್ಯವಾಡಿದರು.

ADVERTISEMENT

ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಕೆ.ಎಸ್.ಶಿವರಾಮು ಮಾತನಾಡಿ, ಡಿ. 24ರಂದು ಬೆಳಿಗ್ಗೆ 11 ಗಂಟೆಗೆ ಇಲ್ಲಿನ ಪುರಭವನದ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.