ಮೈಸೂರು: ಕೆಎಸ್ಆರ್ಟಿಸಿ ನೌಕರರ ಮುಷ್ಕರ ಬುಧವಾರ ಆರಂಭವಾಗಿದ್ದು, ಒಂದು ಬಸ್ ಸಹ ಬೆಳಿಗ್ಗೆಯಿಂದ ರಸ್ತೆಗಿಳಿದಿಲ್ಲ. ಆದರೆ, ಖಾಸಗಿ ಬಸ್ ಗಳಿಗೆ ನಿಲ್ದಾಣದ ಒಳಬರಲು ಅವಕಾಶ ನೀಡಲಾಗಿದೆ.
ಬೆಳಿಗ್ಗೆ 9 ಗಂಟೆಯವರೆಗೆ 25 ಖಾಸಗಿ ಬಸ್ ಗಳು ಬೆಂಗಳೂರು, ಚಾಮರಾಜನಗರ, ಕೊಳ್ಳೇಗಾಲ, ತುಮಕೂರು, ಮಳವಳ್ಳಿ ಸೇರಿದಂತೆ ಇತರೆ ನಗರಗಳಿಗೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಸಂಚಾರ ಆರಂಭಿಸಿವೆ.
ನಗರ ಬಸ್ ನಿಲ್ದಾಣದಿಂದಲೂ ಕೆಲವೊಂದು ಖಾಸಗಿ ಖಾಸಗಿ ವಾಹನಗಳು ಸಂಚಾರ ನಡೆಸಿವೆ. ಎರಡೂ ನಿಲ್ದಾಣದಲ್ಲಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.