ADVERTISEMENT

ತಲಕಾಡು: ಪುನೀತ್‌ ರಾಜ್‌ಕುಮಾರ್ ಪುತ್ಥಳಿ ಅನಾವರಣ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 4:16 IST
Last Updated 18 ಮಾರ್ಚ್ 2022, 4:16 IST
ತಲಕಾಡು ಹೋಬಳಿಯ ಮೇದನಿ ಗ್ರಾಮದಲ್ಲಿ ಪುನೀತ್ ರಾಜ್‌ಕುಮಾರ್ ಪುತ್ಥಳಿಯನ್ನು ಎಚ್. ಸಿ.ಮಹದೇವಪ್ಪ ಅನಾವರಣ ಮಾಡಿದರು. ಸುನಿಲ್ ಬೋಸ್, ಬಸವರಾಜು ಇದ್ದಾರೆ
ತಲಕಾಡು ಹೋಬಳಿಯ ಮೇದನಿ ಗ್ರಾಮದಲ್ಲಿ ಪುನೀತ್ ರಾಜ್‌ಕುಮಾರ್ ಪುತ್ಥಳಿಯನ್ನು ಎಚ್. ಸಿ.ಮಹದೇವಪ್ಪ ಅನಾವರಣ ಮಾಡಿದರು. ಸುನಿಲ್ ಬೋಸ್, ಬಸವರಾಜು ಇದ್ದಾರೆ   

ತಲಕಾಡು: ಹೋಬಳಿಯ ಮೇದನಿ ಗ್ರಾಮದಲ್ಲಿ ಪುನೀತ್‌ ರಾಜ್‌ಕುಮಾರ್‌ ಜನ್ಮದಿನದ ಅಂಗವಾಗಿ ಗುರುವಾರ ಪುನೀತ್‌ ಪುತ್ಥಳಿ ಅನಾವರಣ, ರಕ್ತದಾನ, ನೇತ್ರದಾನ ಶಿಬಿರ ಹಾಗೂ ಆರೋಗ್ಯ ತಪಾಸಣಾ ಶಿಬಿರ ನಡೆದವು.

ಪುನೀತ್‌ ರಾಜ್‌ಕುಮಾರ್‌ ಪುತ್ಥಳಿ ಉದ್ಘಾಟಿಸಿದ ಕಾಂಗ್ರೆಸ್‌ ಮುಖಂಡ ಎಚ್.ಸಿ. ಮಹದೇವಪ್ಪ ಮಾತನಾಡಿ, ‘ಪುನೀತ್‌ ಅವರು ಸಂಸ್ಕಾರ, ವಿಧೇಯತೆ, ಪ್ರೀತಿ, ವಿಶ್ವಾಸದಿಂದ ಎಲ್ಲರ ಮನಸು ಗೆದ್ದಿದ್ದಾರೆ. ಅವರು ಜನ ಮಾನಸದಲ್ಲಿ ಸದಾ ನೆಲೆಸಿರುತ್ತಾರೆ’ ಎಂದರು.

ಮೇದಿನಿ ಮಠದ ಶಿವಲಿಂಗ ಸ್ವಾಮೀಜಿ ಮಾತನಾಡಿ, ‘ಅಪ್ಪು ವ್ಯಕ್ತಿತ್ವ ಹಾಗೂ ಜೀವನ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಅವರ ಜನ್ಮದಿನದ ಅಂಗವಾಗಿ ರಕ್ತದಾನ, ನೇತ್ರದಾನ, ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿರುವುದು ಒಳ್ಳೆಯ ಸಂಗತಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡ ಸುನಿಲ್ ಬೋಸ್, ಮೂಗೂರು ಬಸವರಾಜ್, ಎಂ.ಎನ್.ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಂಜುನಾಥ್, ಬಿಜೆಪಿ ಕ್ಷೇತ್ರ ಅಧ್ಯಕ್ಷ ಲೋಕೇಶ್ ನಾಯಕ, ಕುಕ್ಕೂರು ಗಣೇಶ್, ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಾಗರಾಜ್, ಹೊಳೆಸಾಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವಮ್ಮ, ಸಿದ್ದರಾಜು, ಕುಕ್ಕುರು ಮಹದೇವನಾಯಕ, ಸುಶೀಲ ಮಾದೇಶ್, ನರಸಿಂಹ ಮಾದನಾಯಕ, ಕಾವೇರಿಪುರದ ಮಾದೇವ ಶೆಟ್ಟಿ, ಶಾಂತರಾಜು, ಗೋವಿಂದರಾಜು, ಸಿದ್ದಮ್ಮ ಬಸವರಾಜು, ಸಿದ್ದನಾಯಕ, ಜಯಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.