ಹಾರೋಹಳ್ಳಿ (ರಾಮನಗರ): ವರದಕ್ಷಿಣೆಗಾಗಿ ಪತ್ನಿಯನ್ನು ಹೊಡೆದು ಸಾಯಿಸಿ ಆತ್ಮಹತ್ಯೆಯ ಬಣ್ಣ ಕಟ್ಟಲು ಯತ್ನಿಸಿದ್ದ ಪತಿಗೆ ರಾಮನಗರದ (ಕನಕಪುರ) ಎರಡನೇ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ₹3.50 ಲಕ್ಷ ದಂಡ ವಿಧಿಸಿದೆ.
ಅನಿಲ್ ಕುಮಾರ್ ಶಿಕ್ಷೆಗೊಳಗಾದ ಅಪರಾಧಿ. ಆತನ ಪತ್ನಿ ಅಶ್ವಿನಿ (23) ವರದಕ್ಷಿಣೆ ಕಾರಣಕ್ಕೆ ಪತಿಯಿಂದ ಹಲ್ಲೆಗೊಳಗಾಗಿ ಜೀವ ಕಳೆದುಕೊಂಡವರು. ಚಾಲಕನಾಗಿ ಕೆಲಸ ಮಾಡುತ್ತಿದ್ದ ಅನಿಲ್ನನ್ನು ಅಶ್ವಿನಿ ಅವರು ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಪುತ್ರ ಹಾಗೂ ಇಬ್ಬರು ಪುತ್ರಿಯರಿದ್ದರು. 2020ರ ಮೇ 14ರಂದು ಅಶ್ವಿನಿ ಅವರ ಕೊಲೆಯಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಎಚ್.ಎನ್. ಕುಮಾರ್ ಅವರು, ಅನಿಲ್ ಅಪರಾಧಿ ಎಂದು ಸಾರಿದರು. ಆತನಿಗೆ ಜೀವಾವಧಿ ಶಿಕ್ಷೆ ಮತ್ತು ₹3.50 ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಿದರು. ಪ್ರಕರಣದಲ್ಲಿ ಆತನ ಕುಟುಂಬದ ಮೂವರು ಆರೋಪಿಗಳು ಖುಲಾಸೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.