ರಾಮನಗರ: ಮೇಕೆದಾಟು ಪಾದಯಾತ್ರೆಯ ಮೂರನೇ ದಿನವಾದ ಮಂಗಳವಾರ ನಡಿಗೆ ಸಂದರ್ಭ ಸಂಸದ ಡಿ.ಕೆ. ಸುರೇಶ್ ಯುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ಹ್ಯಾರಿಸ್ ನಲಪಾಡ್ರನ್ನು ಕಾಲರ್ ಹಿಡಿದುಪಕ್ಕಕ್ಕೆ ತಳ್ಳಿದ ಪ್ರಸಂಗ ನಡೆದಿದೆ.
ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ನಡೆಯುತ್ತಿದ್ದ ವೇಳೆ ಇತರರನ್ನು ಪಕ್ಕಕ್ಕೆ ಸರಿಸುವ ಭರದಲ್ಲಿ ನಲಪಾಡ್ ತಾವೇ ನಾಯಕರಿಗೆ ಅಡ್ಡ ಬಂದರು.
ಇದರಿಂದ ಕುಪಿತಗೊಂಡ ಸುರೇಶ್, ನಲಪಾಡ್ ರ ಕೈಯನ್ನು ಎಳೆದು ಪಕ್ಕಕ್ಕೆ ಸರಿಸಿ ಅಡ್ಡ ಬರಬೇಡ ಎಂದು ಎಚ್ಚರಿಕೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.