ADVERTISEMENT

ಮುಷ್ಕರದ ನಡುವೆಯೂ ಬಸ್ ಸಂಚಾರ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2021, 4:31 IST
Last Updated 16 ಏಪ್ರಿಲ್ 2021, 4:31 IST

ರಾಮನಗರ: ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರವು 9ನೇ ದಿನವಾದ ಗುರುವಾರವೂ ಮುಂದುವರಿಯಿತು. ಈ ನಡುವೆ ಅಲ್ಲಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚಾರ ಕೈಗೊಂಡವು.

ರಾಮನಗರ ಡಿಪೊ ವ್ಯಾಪ್ತಿಯಲ್ಲಿ 55 ಕೆಎಸ್‌ಆರ್‌ಟಿಸಿ ಬಸ್‌ಗಳು ಓಡಾಟ ನಡೆಸಿದವು. ಕನಕಪುರ ಡಿಪೊದಿಂದ 12, ಆನೇಕಲ್‌ ಡಿಪೊದಿಂದ 17, ಚನ್ನಪಟ್ಟಣದಿಂದ 4, ಹಾರೋಹಳ್ಳಿಯಿಂದ 6, ರಾಮನಗರದಿಂದ 9 ಹಾಗೂ ಮಾಗಡಿಯಿಂದ 7 ಬಸ್‌ಗಳು ಸಂಚಾರ ಕೈಗೊಂಡವು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಯುಗಾದಿ ಹೊಸತೊಡಕು ಮುಗಿದು ಜನರು ಉದ್ಯೋಗ ಮತ್ತಿತರ ಕಾರಣಗಳಿಗೆ ಪರ ಊರುಗಳತ್ತ ಹೊರಟಿದ್ದು. ಬೆಳಗ್ಗೆ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು. ಹೀಗಾಗಿ ಖಾಸಗಿ ವಾಹನಗಳೂ ಹೆಚ್ಚು ಓಡಾಟ ನಡೆಸಿದವು. ಆದರೆ, ಮಧ್ಯಾಹ್ನದ ನಂತರ ಪ್ರಯಾಣಿಕರು ಹೆಚ್ಚು ಇರಲಿಲ್ಲ.

ADVERTISEMENT

ತಪಾಸಣೆ: ಕನಕಪುರ ಮಾರ್ಗಮಧ್ಯದಲ್ಲಿನ ಕೆಲವು ಬಸ್‌ಗಳನ್ನು ಕಗ್ಗಲೀಪುರ ಭಾಗದ ಪೊಲೀಸರು ತಪಾಸಣೆಗೆ ಒಳಪಡಿಸಿದರು. 18–20 ಬಸ್‌ಗಳನ್ನು ತಪಾಸಣೆ ಮಾಡಿದ್ದು, ಕೆಲವು ಬಸ್‌ಗಳಿಗೆ ಮಾತ್ರ ದಂಡ ವಿಧಿಸಲಾಗಿದೆ. ಇನ್ನೂ ಕೆಲವು ಬಸ್‌ಗಳನ್ನು ಪೊಲೀಸರು ಹಣ ಪಡೆದು ಹಾಗೆಯೇ ಬಿಟ್ಟಿದ್ದಾರೆ ಎಂದು ಬಸ್‌ ಮಾಲೀಕರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.