ADVERTISEMENT

ಪೊಲೀಸರ 27 ಮೊಬೈಲ್ ಕಳವು!

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 17:23 IST
Last Updated 14 ಸೆಪ್ಟೆಂಬರ್ 2019, 17:23 IST
   

ಶಿವಮೊಗ್ಗ: ಹೊರ ಜಿಲ್ಲೆಯಿಂದ ನಗರಕ್ಕೆ ಬಂದಿದ್ದ ಪೊಲೀಸರ27 ಮೊಬೈಲ್ ಹಾಗೂ ಒಟ್ಟು ₹ 25 ಸಾವಿರ ನಗದು ಕಳವು ಆಗಿದೆ ಎಂದುಮೊಬೈಲ್‌ಗಳನ್ನು ಕಳೆದುಕೊಂಡ ಪೊಲೀಸರು ದೊಡ್ಡಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.

ನಗರದಲ್ಲಿ ಗುರುವಾರ ನಡೆದ ಹಿಂದೂ ಮಹಾ ಮಂಡಳಿಯ ಗಣಪತಿ ಮೂರ್ತಿ ವಿಸರ್ಜನೆಯ ಬಂದೋಬಸ್ತ್‌ಗೆ ಬಂದಿದ್ದ ಪೊಲೀಸರಿಗೆ ಆರ್‌ಎಂಎಲ್‌ ನಗರದ ಸಮೀಪವಿರುವ ಕಲ್ಯಾಣ ಮಂದಿರದಲ್ಲಿ ವಾಸ್ತವ್ಯಕ್ಕೆ ಏರ್ಪಾಡು ಮಾಡಲಾಗಿತ್ತು. ಗಾಢ ನಿದ್ರೆಯಲ್ಲಿದ್ದಾಗ ಮೊಬೈಲ್ ಹಾಗೂ ನಗದನ್ನುಕಳ್ಳರು ದೋಚಿಕೊಂಡು ಹೋಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT