ಶಿವಮೊಗ್ಗ: ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ತಮ್ಮ ಕುಟುಂಬದವರೊಂದಿಗೆ ಮನೆಯಲ್ಲಿ ಯೋಗ ದಿನವನ್ನು ಆಚರಿಸಿದರು.
ಪತ್ನಿ ಜಯಲಕ್ಷ್ಮಿ,ಪುತ್ರ ಕಾಂತೇಶ್, ಸೊಸೆ, ಮೊಮ್ಮಕ್ಕಳು ಹಾಗೂ ಸ್ನೇಹಿತರ ಜತೆ ಸೇರಿ ಸಚಿವರು ಯೋಗಾಸನ ಮಾಡಿದರು.
ನಂತರ ಮಾತನಾಡಿದ ಈಶ್ವರಪ್ಪ, ‘ಯೋಗ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ. ಇದು ಇಡೀ ವಿಶ್ವವನ್ನೇ ಒಂದು ಮಾಡಿದೆ. ಪ್ರಪಂಚದ ಎಲ್ಲಾ ಜನರು ಜಾತಿ, ಧರ್ಮವನ್ನೂ ಮೀರಿ ಆರೋಗ್ಯದ ದೃಷ್ಟಿಯಿಂದ ಯೋಗವನ್ನು ಮಾಡುತ್ತಿದ್ದಾರೆ. ಇದನ್ನು ವಿಶ್ವದಾದ್ಯಂತ ಪರಿಚಯಿಸಿ ಅದಕ್ಕೊಂದು ದಿನಾಚರಣೆಯನ್ನಾಗಿಸಿರುವ ಕೀರ್ತಿ ಪ್ರಧಾನಿ ಮೋದಿಯವರಿಗೆ ಸಲ್ಲಬೇಕು’ ಎಂದರು.
‘ಕೊರೊನಾ ಸೋಂಕು ಪ್ರಪಂಚವನ್ನು ಆಕ್ರಮಿಸುತ್ತಿರುವುದರಿಂದ ಎಲ್ಲರೂ ಯೋಗವನ್ನು ಮನೆಯಲ್ಲೇ ಆಚರಿಸುವುದು ಪ್ರಧಾನಿ ಅವರ ಅಪೇಕ್ಷೆ ಆಗಿತ್ತು. ಯೋಗವನ್ನು ಪ್ರತಿದಿನ ಅಭ್ಯಾಸ ಮಾಡುವ ಮೂಲಕ ಆರೋಗ್ಯವಾಗಿರೋಣ’ ಎಂದು ಆಶಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.