ADVERTISEMENT

ನೀರು ಪೂರೈಕೆಯಲ್ಲಿ ನಗರಸಭೆ ವಿಫಲ: ಟಿ.ಬಿ.ಜಯಚಂದ್ರ ಆರೋಪ

ಜಲ ಸಂಗ್ರಹಗಾರಕ್ಕೆ ಭೇಟಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 3:49 IST
Last Updated 17 ಜುಲೈ 2021, 3:49 IST
ಶಿರಾದ ದೊಡ್ಡ ಕೆರೆಯ ಜಲ ಶುದ್ಧೀಕರಣ ಘಟಕಕ್ಕೆ ಕಾಂಗ್ರೆಸ್‌ ಮುಖಂಡ ಟಿ.ಬಿ.ಜಯಚಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಖಂಡರಾದ ಅಮಾನುಲ್ಲಾಖಾನ್, ಜಾಫರ್, ಪಾಂಡುರಂಗಪ್ಪ, ಹಬೀಬ್ ಖಾನ್, ಶ್ರೀನಿವಾಸ್, ಜೀಷಾನ್ ಅಹಮದ್, ಹರೀಶ್, ಬುರ್ರಾನ್ ಅಹಮದ್ ಇದ್ದರು
ಶಿರಾದ ದೊಡ್ಡ ಕೆರೆಯ ಜಲ ಶುದ್ಧೀಕರಣ ಘಟಕಕ್ಕೆ ಕಾಂಗ್ರೆಸ್‌ ಮುಖಂಡ ಟಿ.ಬಿ.ಜಯಚಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಖಂಡರಾದ ಅಮಾನುಲ್ಲಾಖಾನ್, ಜಾಫರ್, ಪಾಂಡುರಂಗಪ್ಪ, ಹಬೀಬ್ ಖಾನ್, ಶ್ರೀನಿವಾಸ್, ಜೀಷಾನ್ ಅಹಮದ್, ಹರೀಶ್, ಬುರ್ರಾನ್ ಅಹಮದ್ ಇದ್ದರು   

ಶಿರಾ: ಜನರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವಲ್ಲಿನಗರಸಭೆ ವಿಫಲವಾಗಿದೆ ಎಂದು ಕಾಂಗ್ರೆಸ್‌ ಮುಖಂಡ ಟಿ.ಬಿ.ಜಯಚಂದ್ರ ಆರೋಪಿಸಿದರು.

ನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ದೊಡ್ಡ ಕೆರೆಯ ಜಲ ಸಂಗ್ರಹಗಾರಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ
ಮಾತನಾಡಿದರು.

ಕೆರೆಯಲ್ಲಿ ಸಾಕಷ್ಟು ನೀರಿದ್ದರೂ, ಶುದ್ಧೀಕರಣ ಘಟಕದ ಯಂತ್ರ ಕೆಟ್ಟಿದೆ ಎಂದು ದುರಸ್ತಿ ಮಾಡದೇ ಕೊಳಚೆ ನೀರು ಪೂರೈಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ADVERTISEMENT

ನಗರಸಭೆ ಅವರು ಮನೆಗಳಿಗೆ ಕೊಳಚೆ ನೀರು ಪೂರೈಕೆ ಮಾಡಿರುವುದರಿಂದ ಮನೆಯಲ್ಲಿ ನೀರಿನ ಶೇಖರಣೆ ಮಾಡುವ ತೊಟ್ಟಿಗಳು ಕಲುಷಿತವಾಗಿದೆ. ಇದನ್ನು ಸ್ವಚ್ಛಗೊಳಿಸಲು ನೂರಾರು ರೂಪಾಯಿ ತೆರಬೇಕಾದ ಪರಿಸ್ಥಿತಿ ಇದೆ. ಈ ನಿಟ್ಟಿನಲ್ಲಿ ನಗರಸಭೆ ಒಂದು ವರ್ಷದ ನೀರಿನ ಕಂದಾಯವನ್ನು ಮನ್ನಾ ಮಾಡಬೇಕು ಎಂದರು.

ನಗರಸಭೆಯಲ್ಲಿ ಜನ ಪ್ರತಿನಿಧಿಗಳು ಇಲ್ಲದ ಸಮಯದಲ್ಲಿ‌ ಶಾಸಕರು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು. ಆದರೆ ತಮ್ಮ ಜವಾಬ್ದಾರಿಯನ್ನು ನಿರ್ವಹಣೆ ಮಾಡಲು ಶಾಸಕರು ವಿಫಲವಾಗಿದ್ದು ಜನರು ಸಂಕಷ್ಟ ಪಡುವಂತಾಗಿದೆ ಎಂದರು.

ಮುಖಂಡರಾದ ಅಮಾನುಲ್ಲಾಖಾನ್, ಜಾಫರ್, ಪಾಂಡುರಂಗಪ್ಪ, ಹಬೀಬ್ ಖಾನ್, ಶ್ರೀನಿವಾಸ್, ಜೀಷಾನ್ ಅಹಮದ್, ಹರೀಶ್, ಬುರ್ರಾನ್ ಅಹಮದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.