
ಪ್ರಜಾವಾಣಿ ವಾರ್ತೆತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಬಳಿಯ ಅಳಕಟ್ಟೆ ಎಲ್.ತಾಂಡಾದ ಗಂಗಲಕ್ಷ್ಮಮ್ಮ ತಮ್ಮ ಮನೆಯಲ್ಲೇ ಅಣಬೆ ಬೆಳೆಯುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಕಡಿಮೆ ಅವಧಿಯಲ್ಲಿ ಇಳುವರಿ ಸಿಗುವ, ಹೆಚ್ಚಿನ ಶ್ರಮ ಬೇಡದ ಅಣಬೆ ಬೇಸಾಯ ಗಂಗಲಕ್ಷ್ಮಮ್ಮ ಅವರ ಕೈ ಹಿಡಿದಿದೆ. ಗಂಗಲಕ್ಷ್ಮಮ್ಮ ಪ್ರತಿ ದಿನ 7ರಿಂದ 8 ಕೆ.ಜಿ ಅಣಬೆ ಮಾರಾಟ ಮಾಡುತ್ತಿದ್ದಾರೆ. ತಿಂಗಳಿಗೆ 200 ಕೆ.ಜಿಯಿಂದ 250 ಕೆ.ಜಿ ಮಾರಾಟವಾಗುತ್ತಿದೆ. ಪ್ರತಿ ಕೆ.ಜಿಗೆ ₹250 ದರ ನಿಗದಿ ಪಡಿಸಿದ್ದಾರೆ. ಅಣಬೆ ಕೃಷಿಯನ್ನು ಮತ್ತಷ್ಟು ವಿಸ್ತರಿಸುವ ಯೋಜನೆಯಲ್ಲಿದ್ದು, ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.