ADVERTISEMENT

ಚಿತ್ರಗಳು: ಶ್ರೀಕೃಷ್ಣ ಜನ್ಮಾಷ್ಟಮಿಗೆ 40,000 ಚಕ್ಕುಲಿ ಹಾಗೂ 80,000 ತರಹೇವಾರಿ ಉಂಡೆಗಳು; ಉಡುಪಿ ಶ್ರೀಕೃಷ್ಣ ಮಠದಲ್ಲಿ ತಯಾರಿ

ಕಡೆಗೋಲು ಕೃಷ್ಣನೂರು ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಮನೆಮಾಡಿದೆ. ಕೃಷ್ಣಮಠದ ರಥಬೀದಿ ಅಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವಕ್ಕೆ ಸಿಂಗಾರಗೊಂಡು ಕಂಗೊಳಿಸುತ್ತಿದೆ. ಕೃಷ್ಣನ ಲೀಲೋತ್ಸವ ಕಣ್ತುಂಬಿಕೊಳ್ಳಲು ಹೊರ ಜಿಲ್ಲೆಗಳಿಂದ ಭಕ್ತರು ಉಡುಪಿಗೆ ಹರಿದು ಬರುತ್ತಿದ್ದಾರೆ. ಸಂಪ್ರದಾಯದಂತೆ ಕೃಷ್ಣನಿಗೆ ಪ್ರಿಯವಾದ ಚಕ್ಕುಲಿ ಹಾಗೂ ಬಗೆ ಬಗೆಯ ಉಂಡೆಗಳನ್ನು ತಯಾರಿಸಲಾಗಿದೆ.

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2021, 13:04 IST
Last Updated 29 ಆಗಸ್ಟ್ 2021, 13:04 IST
ಶ್ರೀಕೃಷ್ಣ ಜನ್ಮಾಷ್ಟಮಿಗಾಗಿ ಸಂಪ್ರದಾಯದಂತೆ ಕೃಷ್ಣನಿಗೆ ಪ್ರಿಯವಾದ ಚಕ್ಕುಲಿ ಹಾಗೂ ಬಗೆ ಬಗೆಯ ಉಂಡೆಗಳನ್ನು ತಯಾರಿಸಲಾಗಿದೆ.
ಶ್ರೀಕೃಷ್ಣ ಜನ್ಮಾಷ್ಟಮಿಗಾಗಿ ಸಂಪ್ರದಾಯದಂತೆ ಕೃಷ್ಣನಿಗೆ ಪ್ರಿಯವಾದ ಚಕ್ಕುಲಿ ಹಾಗೂ ಬಗೆ ಬಗೆಯ ಉಂಡೆಗಳನ್ನು ತಯಾರಿಸಲಾಗಿದೆ.    
40,000 ಚಕ್ಕುಲಿ ಹಾಗೂ 80,000 ತರಹೇವಾರಿ ಉಂಡೆಗಳು ತಯಾರಾಗಿದ್ದು, ಅಷ್ಟಮಿಯ ದಿನ ಭಕ್ತರಿಗೆ ಹಂಚಲಾಗುತ್ತದೆ.
ಶ್ರೀಕೃಷ್ಣಮಠದಲ್ಲಿ ಅಷ್ಟಮಿಯ ಪ್ರಯುಕ್ತ ಭಕ್ತಾದಿಗಳಿಗೆ ಪ್ರಸಾದ ವಿತರಣೆ
ಕಳೆದೆರಡು ದಿನಗಳಿಂದ ಕೃಷ್ಣಮಠದ ಬಾಣಸಿಗರು ಹಾಗೂ ಭಕ್ತರು ಸೇರಿ ಉಂಡೆ ಹಾಗೂ ಚಕ್ಕುಲಿಗಳ ತಯಾರಿ
ಚಕ್ಕುಲಿ, ಉಂಡೆಗಳನ್ನು ಪೊಟ್ಟಣಗಳಿಗೆ ಹಾಕುತ್ತಿರುವುದು.
ಕಳೆದೆರಡು ದಿನಗಳಿಂದ ಕೃಷ್ಣಮಠದ ಬಾಣಸಿಗರು ಹಾಗೂ ಭಕ್ತರು ಸೇರಿ ಉಂಡೆ ಹಾಗೂ ಚಕ್ಕುಲಿಗಳ ತಯಾರಿ
ಕಡಲೆಬೀಜಗಳ ಉಂಡೆ, ಎಳ್ಳುಂಡೆ, ಕಡಲೆ ಉಂಡೆ ಹಾಗೂ ಗರಿ ಗರಿ ಚಕ್ಕುಲಿಗಳು...
ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಶ್ರೀಕೃಷ್ಣ ಲೀಲೋತ್ಸವಕ್ಕೆ ಸಜ್ಜುಗೊಂಡ ಉಡುಪಿ
ಜನ್ಮಾಷ್ಟಮಿಯ ದಿನ ಮಧ್ಯರಾತ್ರಿ ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ದೇವರಿಗೆ ಅರ್ಘ್ಯ ಸಮರ್ಪಿಸಲಿದ್ದಾರೆ.
ಸಾಂಪ್ರದಾಯಿಕ ಮೊಸರು ಕುಡಿಕೆ ಒಡೆಯುವ ಆಚರಣೆಯಲ್ಲಿ ಬಳಸುವ ಕುಡಿಕೆಯನ್ನು ಚಿತ್ರಿಸುತ್ತಿರುವುದು
ಆ.30ರಂದು ಕೃಷ್ಣ ಜನ್ಮಾಷ್ಟಮಿ, 31ರಂದು ವಿಟ್ಲಪಿಂಡಿ ಉತ್ಸವ ನಡೆಯಲಿದೆ.
ಕಡಲೆಬೀಜಗಳ ಉಂಡೆ, ಎಳ್ಳುಂಡೆ, ಕಡಲೆ ಉಂಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.