ADVERTISEMENT

ವಿದ್ಯಾಸಾಗರ ತೀರ್ಥ ಶ್ರೀಗಳಿಂದ ಕೃಷ್ಣಾಪುರ ಮಠದ ವೆಬ್‌ಸೈಟ್ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2022, 15:50 IST
Last Updated 3 ಜನವರಿ 2022, 15:50 IST
ಕಾಪುವಿನ ದಂಡತೀರ್ಥ ಮಠದಲ್ಲಿ ಸೋಮವಾರ ಭಾವಿ ಪರ್ಯಾಯ ಕೃಷ್ಣಾಪುರ ಮಠದ ವೆಬ್ ಸೈಟ್ ಅನ್ನು ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರ ತೀರ್ಥ ಶ್ರೀಗಳು ಉದ್ಘಾಟಿಸಿದರು.
ಕಾಪುವಿನ ದಂಡತೀರ್ಥ ಮಠದಲ್ಲಿ ಸೋಮವಾರ ಭಾವಿ ಪರ್ಯಾಯ ಕೃಷ್ಣಾಪುರ ಮಠದ ವೆಬ್ ಸೈಟ್ ಅನ್ನು ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರ ತೀರ್ಥ ಶ್ರೀಗಳು ಉದ್ಘಾಟಿಸಿದರು.   

ಕಾಪು: ಕಾಪುವಿನ ದಂಡತೀರ್ಥ ಮಠದಲ್ಲಿ ಸೋಮವಾರ ಭಾವಿ ಪರ್ಯಾಯ ಕೃಷ್ಣಾಪುರ ಮಠದ ವೆಬ್ ಸೈಟ್ (www.krishnapuramatha.org) ಅನ್ನು ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರ ತೀರ್ಥ ಶ್ರೀಗಳು ಉದ್ಘಾಟಿಸಿದರು.

ಮಠದ ವೆಬ್‌ಸೈಟ್‌ನಲ್ಲಿ ಎಲ್ಲ ವಿಚಾರಗಳು ಅಡಕವಾಗಿದ್ದು, ದೇಶ ವಿದೇಶಗಳಲ್ಲಿರುವ ಭಕ್ತರಿಗೆ ಮಠದ ವಿಚಾರಗಳು ತಿಳಿಯಲಿದೆ. ಎಲ್ಲ ಭಕ್ತರು ವೆಬ್‌ಸೈಟ್‌ನ ಪ್ರಯೋಜನ ಪಡೆಯಬೇಕು ಎಂದು ಸ್ವಾಮೀಜಿ ಹೇಳಿದರು.

ಈ ಸಂದರ್ಭ ಪರ್ಯಾಯೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರು, ಸಮಿತಿಯ ಪದಾಧಿಕಾರಿಗಳಾದ ರಾಘವೇಂದ್ರ ರಾವ್, ಶ್ರೀಶ ಆಚಾರ್ಯ, ಸೀತಾರಾಮ ಭಟ್, ವೆಬ್ ಸೈಟ್‌ ವಿನ್ಯಾಸ ಮಾಡಿದ ವಾದಿರಾಜ ಆಚಾರ್ಯ ಮತ್ತು ವಸಂತ ಕೇದಗೆ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.