ADVERTISEMENT

ಮೀನು ಮುಟ್ಟಿದ್ದೇನೆಂದು ದೇವಸ್ಥಾನ ಪ್ರವೇಶಿಸಲು ಒಪ್ಪದ ರಾಹುಲ್

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2023, 14:29 IST
Last Updated 27 ಏಪ್ರಿಲ್ 2023, 14:29 IST
ಮೀನು ಸ್ವೀಕರಿಸಿ ಮಹಿಳೆಯ ಜತೆ ರಾಹುಲ್ ಗಾಂಧಿ ಫೋಟೊ ತೆಗೆಸಿಕೊಂಡರು.
ಮೀನು ಸ್ವೀಕರಿಸಿ ಮಹಿಳೆಯ ಜತೆ ರಾಹುಲ್ ಗಾಂಧಿ ಫೋಟೊ ತೆಗೆಸಿಕೊಂಡರು.   

ಉಡುಪಿ: ಕಾಪು ತಾಲ್ಲೂಕಿನ ಉಚ್ಚಿಲದಲ್ಲಿ ಮೀನುಗಾರರ ಸಂವಾದ ಕಾರ್ಯಕ್ರಮದಲ್ಲಿ ಮೀನುಗಾರ ಮಹಿಳೆಯೊಬ್ಬರು ರಾಹುಲ್ ಗಾಂಧಿಗೆ ಅಂಜಲ್ ಮೀನನ್ನು ಉಡುಗೊರೆಯಾಗಿ ನೀಡಿದರು.

ಮೀನು ಸ್ವೀಕರಿಸಿ ಮಹಿಳೆಯ ಜತೆ ಫೋಟೊ ತೆಗೆಸಿಕೊಂಡ ರಾಹುಲ್ ಬಳಿಕ ಪಕ್ಕದಲ್ಲಿಯೇ ಇದ್ದ ಮಹಾಲಕ್ಷ್ಮೀ ದೇವಸ್ಥಾನದ ಒಳಗೆ ಹೋಗಲು ನಿರಾಕರಿಸಿದರು.

ಸ್ಥಳೀಯ ಮುಖಂಡರು ದೇವಸ್ಥಾನದ ಒಳಗೆ ಬರುವಂತೆ ಮನವಿ ಮಾಡಿದಾಗ ಮೀನು ಮುಟ್ಟಿದ್ದೇನೆ ದೇವಸ್ಥಾನದ ಒಳಗೆ ಬರುವುದಿಲ್ಲ ಎಂದು ತಿಳಿಸಿದರು. ಬಳಿಕ ದೇಗುಲದ ಪ್ರಾಂಗಣದಲ್ಲಿಯೇ ಅರ್ಚಕರು ರಾಹುಲ್ ಗಾಂಧಿ ಅವರನ್ನು ಗೌರವಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.