ADVERTISEMENT

ಭಟ್ಕಳ: ದೋಣಿ ಮಗುಚಿ ನಾಲ್ವರು ಸಮುದ್ರಪಾಲು

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 17:45 IST
Last Updated 30 ಜುಲೈ 2025, 17:45 IST
ಭಟ್ಕಳ ತಾಲ್ಲೂಕಿನ ಅಳ್ವೆಕೋಡಿ ಬಳಿ ಪತ್ತೆಯಾದ ಮೀನುಗಾರಿಕೆ ದೋಣಿ 
ಭಟ್ಕಳ ತಾಲ್ಲೂಕಿನ ಅಳ್ವೆಕೋಡಿ ಬಳಿ ಪತ್ತೆಯಾದ ಮೀನುಗಾರಿಕೆ ದೋಣಿ    

ಭಟ್ಕಳ (ಉತ್ತರ ಕನ್ನಡ): ಸಾಂ‍ಪ್ರದಾಯಿಕ ದೋಣಿಯಲ್ಲಿ ಜಾಲಿ ಕಡಲತೀರದಿಂದ ಮೀನುಗಾರಿಕೆಗೆ ತೆರಳಿದ್ದ ಆರು ಜನರ ಪೈಕಿ ನಾಲ್ವರು ಬುಧವಾರ ನೀರುಪಾಲಾಗಿದ್ದಾರೆ. ಅಳ್ವೆಕೋಡಿ ಬಳಿ ಅಲೆಗಳ ರಭಸಕ್ಕೆ ದೋಣಿ ಮಗುಚಿದ್ದು, ಅದು ದಡದ ಬಳಿ ಪತ್ತೆಯಾಗಿದೆ.

ಜಾಲಿಕೋಡಿಯ ರಾಮಕೃಷ್ಣ ಮೊಗೇರ (40), ಅಳ್ವೆಕೋಡಿಯ ಸತೀಶ ಮೊಗೇರ (26), ಗಣೇಶ ಮೊಗೇರ (27), ನಿಶ್ಚಿತ ಮೊಗೇರ (30) ನೀರುಪಾಲಾದವರು. ಮನೋಹರ ಮೊಗೇರ ಮತ್ತು ರಾಮ ಖಾರ್ವಿ ಎಂಬುವರು ಈಜಿ ದಡ ಸೇರಿದ್ದಾರೆ. ನಾಪತ್ತೆಯಾದವರಿಗೆ ಹುಡುಕಾಟ ಮುಂದುವರೆದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT