ಗೋಕರ್ಣ: ಕುಮಟಾ ಸಮೀಪದ ಕಡ್ಲೆ ಬಳಿ ಬಂಡೆಕಲ್ಲಿಗೆ ಬಡಿದು ನಿಯಂತ್ರಣ ತಪ್ಪಿದ ಪರಿಣಾಮ ಶುಕ್ರವಾರ ಪರ್ಸಿನ್ ಬೋಟ್ ಮುಳುಗಿದೆ. ಅದರಲ್ಲಿದ್ದ 17 ಮಂದಿಯನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿ ರಕ್ಷಿಸಿದ್ದಾರೆ.
ಬೆಳ್ಳಂಬಾರದ ಸುಧಾಕರ ಖಾರ್ವಿ ಒಡೆತನ ಶ್ರೀದೇವಿ ಅನುಗ್ರಹ ಹೆಸರಿನ ಬೋಟ್ ಮುಳುಗಿದೆ. ಮೀನುಗಾರಿಕೆಗೆ ತೆರಳಿದ್ದ ಕಾರ್ಮಿಕರು ಮರಳಿ ಬರುವ ವೇಳೆ ದುರ್ಘಟನೆ ಸಂಭವಿಸಿತ್ತು.
ಕರಾವಳಿ ಪಡೆ ಕುಮಟಾ ಠಾಣೆಯ ಗಣಪತಿ ನಾಯಕ, ಶ್ರೀನಿವಾಸ್ ದುರ್ಗೇಕರ್, ಸಂತೋಷ ಹರಿಕಂತ್ರ ನೇತೃತ್ವದ ತಂಡ ರಕ್ಷಣಾ ಕಾರ್ಯಾಚರಣೆ ನಡೆಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.