ADVERTISEMENT

ಕರಾವಳಿ ಕಾವಲು ಪಡೆ ಸಿಬ್ಬಂದಿ ಕಾರ್ಯಾಚರಣೆ: ಮೀನುಗಾರರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 1:16 IST
Last Updated 25 ಜನವರಿ 2021, 1:16 IST

ಕಾರವಾರ: ಮೀನುಗಾರಿಕೆ ನಡೆಸಿ ಪುನಃ ಬರುತ್ತಿದ್ದ ದೋಣಿಯೊಂದರ ತಳಭಾಗ ಒಡೆದು ಇಲ್ಲಿನ ಲೈಟ್ ಹೌಸ್ ಬಳಿ ಸಮುದ್ರದಲ್ಲಿ ಭಾನುವಾರ ರಾತ್ರಿ ಭಾಗಶಃ ಮುಳುಗಿತ್ತು. ಕರಾವಳಿ ಕಾವಲು ಪಡೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ದೋಣಿಯನ್ನು ಕಾರವಾರದ ಬೈತಖೋಲ್‌ ಮೀನುಗಾರಿಕಾ ಬಂದರಿಗೆ ತಂದಿದ್ದಾರೆ.

ದೋಣಿಯಲ್ಲಿದ್ದ ಎಲ್ಲ ಎಂಟು ಮೀನುಗಾರರನ್ನು ಇತರ ದೋಣಿಗಳ ಮೀನುಗಾರರನ್ನು ರಕ್ಷಿಸಿದ್ದಾರೆ.

ಉಡುಪಿಯ ನೋಂದಣಿ ಸಂಖ್ಯೆ ಹೊಂದಿರುವ 'ಶ್ರೀ ಸೌಪರ್ಣಿಕಾ' ಹೆಸರಿನ ದೋಣಿ ಇದಾಗಿದ್ದು, ತಳ ಒಡೆದ ಕಾರಣ ಅದರ ಎಂಜಿನ್ ವರೆಗೂ ನೀರು ನುಗ್ಗಿತ್ತು. ಈ ಸಂಬಂಧ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಮೀನುಗಾರರು ಮಾಹಿತಿ ರವಾನಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.