ADVERTISEMENT

ಯಲ್ಲಾಪುರ: ಕೊಚ್ಚಿಹೋದ ಮಾದನಸರ ಸೇತುವೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 13:22 IST
Last Updated 6 ಆಗಸ್ಟ್ 2020, 13:22 IST
ಧಾರಾಕಾರ ಮಳೆಗೆ ಯಲ್ಲಾಪುರ ತಾಲ್ಲೂಕಿನ ಮಾದನಸರ ಸೇತುವೆ ಕೊಚ್ಚಿಹೋಗಿರುವುದು
ಧಾರಾಕಾರ ಮಳೆಗೆ ಯಲ್ಲಾಪುರ ತಾಲ್ಲೂಕಿನ ಮಾದನಸರ ಸೇತುವೆ ಕೊಚ್ಚಿಹೋಗಿರುವುದು   

ಯಲ್ಲಾಪುರ: ತಾಲ್ಲೂಕಿನಲ್ಲಿ ಸುರಿದ ಧಾರಾಕಾರ ಮಳೆಗೆ ಮಂಚಿಕೇರಿಯಿಂದ ಬಿಳ್ಕಿಗೆ ತಲುಪುವ ಮಾರ್ಗ ಮಧ್ಯೆ ಮಾದನಸರ ಹಳ್ಳಕ್ಕೆ ನಿರ್ಮಿಸಿದ್ದ ಸೇತುವೆ ಬುಧವಾರ ರಾತ್ರಿ ಕೊಚ್ಚಿಕೊಂಡು ಹೋಗಿದೆ. ಇದರಿಂದಾಗಿ ಬಿಳ್ಕಿ ಭಾಗದ ಜನರಿಗೆ ಮಂಚಿಕೇರಿಯ ಸಂಪರ್ಕ ತಪ್ಪಿದೆ.

ನೀರಿನ ರಭಸಕ್ಕೆ ಸುಮಾರು 30 ಅಡಿಯವರೆಗೆ ಸಂಪರ್ಕ ರಸ್ತೆ ಕೂಡ ಕೊಚ್ಚಿಕೊಂಡು ಹೋಗಿದೆ. ಅಕ್ಕಪಕ್ಕದ ಕೃಷಿ ಭೂಮಿಗೆ ನೀರು ನುಗ್ಗಿದೆ. ಬಿದಿರು ಹಿಂಡು ಬಿದ್ದ ಪರಿಣಾಮ ಸೇತುವೆಯ ಅಡಿಯಲ್ಲಿ ನೀರು ಹರಿಯಲು ತೊಡಕಾಗಿತ್ತು. ನೀರು ಸರಾಗವಾಗಿ ಹರಿಯುವ ದಾರಿಗಳು ಬಂದಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT