ADVERTISEMENT

ವಿಜಯನಗರ: ಜಿಮ್ ಟ್ರೈನರ್ ಧನ್ಯಕುಮಾರ್ ಹತ್ಯೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2022, 7:45 IST
Last Updated 28 ಏಪ್ರಿಲ್ 2022, 7:45 IST
ದಾವಣಗೆರೆ ನಗರದ ನಿಟ್ಟುವಳ್ಳಿ ವಾಸಿ ಧನ್ಯಕುಮಾರ್ (31) ಹತ್ಯೆಗೀಡಾದ ಯುವಕ. 
ದಾವಣಗೆರೆ ನಗರದ ನಿಟ್ಟುವಳ್ಳಿ ವಾಸಿ ಧನ್ಯಕುಮಾರ್ (31) ಹತ್ಯೆಗೀಡಾದ ಯುವಕ.    

ಅರಸೀಕೆರೆ (ವಿಜಯನಗರ ಜಿಲ್ಲೆ): ಇಲ್ಲಿನ ಬೇವಿನಹಳ್ಳಿ ದೊಡ್ಡ ತಾಂಡದ ಬಳಿ ಬುಧವಾರ ರಾತ್ರಿ ಜಿಮ್ ಟ್ರೈನರ್ ಒಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ದಾವಣಗೆರೆ ನಗರದ ನಿಟ್ಟುವಳ್ಳಿ ವಾಸಿ ಧನ್ಯಕುಮಾರ್ (31) ಹತ್ಯೆಗೀಡಾದ ಯುವಕ.

ಬುಧವಾರ ಸ್ನೇಹಿತರೊಂದಿಗೆ ಉಚ್ಚಂಗಿದುರ್ಗ ತೋಪಿಗೆ ಬಾಡೂಟಕ್ಕೆ ಬಂದಿದ್ದರು.ಮಾಹಿತಿ ಪಡೆದ ಮತ್ತೊಂದು ಗುಂಪು ಉಪಾಯದಿಂದ ಕರೆಯಿಸಿಕೊಂಡು ಚಾಕುವಿನಿಂದ ಇರಿದು ಕೊಲೆ ಮಾಡಿದೆ.ಪಟ್ಟಣದ ಜಿಮ್ ಟ್ರೈನಿಂಗ್ ಸೆಂಟರ್ ನಲ್ಲಿ ತರಬೇತುದಾರರಾಗಿದ್ದರು. ದೇಹದಾರ್ಢ್ಯ ಪಟುವಾಗಿದ್ದ ಅವರು ಅನೇಕ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದರು.

ADVERTISEMENT

ಸ್ಥಳಕ್ಕೆ ಹರಪನಹಳ್ಳಿ ಡಿ.ವೈ.ಎಸ್.ಪಿ ಹಾಲಮೂರ್ತಿ ರಾವ್, ಸಿಪಿಐ ನಾಗರಾಜ ಕಮ್ಮಾರ್, ಅರಸೀಕೆರೆ ಸಬ್ ಇನ್ಸ್ಪೆಕ್ಟರ್ ಪ್ರಶಾಂತ್, ನಾಗರತ್ನ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.