ADVERTISEMENT

ಸಿದ್ದರಾಮಯ್ಯ ತುಘಲಕ್‌ನಂತೆ ಬುದ್ಧಿವಂತ ಮೂರ್ಖರು- ಸಚಿವ ಬಿ. ಶ್ರೀರಾಮುಲು 

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2022, 9:16 IST
Last Updated 27 ಮಾರ್ಚ್ 2022, 9:16 IST
ಅಮರಾವತಿಯಲ್ಲಿ ಭಾನುವಾರ ಟ್ರಕ್‌ ಟರ್ಮಿನಲ್‌ ಭೂಮಿಪೂಜೆ ನೆರವೇರಿಸಿದ ಸಾರಿಗೆ ಸಚಿವ ಬಿ. ಶ್ರೀರಾಮುಲು.
ಅಮರಾವತಿಯಲ್ಲಿ ಭಾನುವಾರ ಟ್ರಕ್‌ ಟರ್ಮಿನಲ್‌ ಭೂಮಿಪೂಜೆ ನೆರವೇರಿಸಿದ ಸಾರಿಗೆ ಸಚಿವ ಬಿ. ಶ್ರೀರಾಮುಲು.   

ಹೊಸಪೇಟೆ (ವಿಜಯನಗರ): ‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ತುಘಲಕ್‌ನಂತೆ ಬುದ್ಧಿವಂತ ಮೂರ್ಖರು’ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಟೀಕಿಸಿದರು.

ನಗರದ ಹೊರವಲಯದ ಅಮರಾವತಿಯಲ್ಲಿ ಭಾನುವಾರ ಟ್ರಕ್‌ ಟರ್ಮಿನಲ್‌ ಭೂಮಿಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯನವರು ಮಠಾಧೀಶರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ತುಘಲಕ್‌ ರಾಜ ಒಂದು ಕಡೆ ಬುದ್ಧಿವಂತನಾಗಿದ್ದರೂ, ಮೂರ್ಖನಾಗಿದ್ದ. ಅದೇ ರೀತಿ ಸಿದ್ದರಾಮಯ್ಯನವರು ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯನವರು ಬಹಳ ಬುದ್ಧಿವಂತರು. ಆದರೆ, ಆಗಾಗ ಇಂತಹ ಹಗುರವಾದ ಮಾತುಗಳನ್ನು ಆಡುವುದರ ಮೂಲಕ ಮೂರ್ಖತನ ಪ್ರದರ್ಶಿಸುತ್ತಿದ್ದಾರೆ. ಆದಷ್ಟು ಬೇಗ ಅವರು ಎಲ್ಲ ಮಠಾಧೀಶರ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.