ADVERTISEMENT

ಬಜೆಟ್‌ನಲ್ಲಿ ಅರ್ಚಕರ ತಸ್ತೀಕ್‌ ಭತ್ಯೆ ಹೆಚ್ಚಳ: ಸಚಿವೆ ಶಶಿಕಲಾ ಜೊಲ್ಲೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2022, 14:02 IST
Last Updated 3 ಮಾರ್ಚ್ 2022, 14:02 IST
ಹೊಸಪೇಟೆಯ ಕೃಷ್ಣಮಠದಲ್ಲಿ ಗುರುವಾರ ಸಂಜೆ ರಾಘವೇಂದ್ರ ಸ್ವಾಮಿ ಸಪ್ತಾಹಕ್ಕೆ ಚಾಲನೆ ನೀಡಿದ ಸಚಿವೆ ಶಶಿಕಲಾ ಜೊಲ್ಲೆ
ಹೊಸಪೇಟೆಯ ಕೃಷ್ಣಮಠದಲ್ಲಿ ಗುರುವಾರ ಸಂಜೆ ರಾಘವೇಂದ್ರ ಸ್ವಾಮಿ ಸಪ್ತಾಹಕ್ಕೆ ಚಾಲನೆ ನೀಡಿದ ಸಚಿವೆ ಶಶಿಕಲಾ ಜೊಲ್ಲೆ   

ಹೊಸಪೇಟೆ (ವಿಜಯನಗರ): ‘ಸಿ’ ದರ್ಜೆಯ ದೇವಸ್ಥಾನಗಳ ಅರ್ಚಕರ ತಸ್ತೀಕ್‌ ಭತ್ಯೆಯನ್ನುಬಜೆಟ್‌ನಲ್ಲಿ ಹೆಚ್ಚಿಸಲಾಗುವುದು ಎಂದು ಮುಜರಾಯಿ, ಹಜ್‌ ಮತ್ತು ವಕ್ಫ್‌ ಖಾತೆ ಸಚಿವೆ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ ತಿಳಿಸಿದರು.

ನಗರದ ಕೃಷ್ಣಮಠದಲ್ಲಿ ಗುರುವಾರ ಸಂಜೆ ರಾಘವೇಂದ್ರ ಸ್ವಾಮಿ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಎ’ ದರ್ಜೆ ದೇವಸ್ಥಾನದ ಅರ್ಚಕರಿಗೆ ಆರನೇ ವೇತನ ಆರಂಭಿಸಲಾಗಿದೆ. ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿನ ದೇಗುಲದ ಅರ್ಚಕರ ಆರೋಗ್ಯ ಹಿತದೃಷ್ಟಿಯಿಂದ ಆರೋಗ್ಯ ವಿಮೆ ಮಾಡಿಸಲಾಗಿದೆ. ಎಲ್ಲ ದೇವಾಲಯಗಳಲ್ಲಿ ಕುಡಿವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT