ADVERTISEMENT

ನಾಲ್ಕನೇ ಚಿತ್ರಕ್ಕೆ ಮತ್ತೆ ಒಂದಾದ ಅಲ್ಲು ಅರ್ಜುನ್– ತ್ರಿವಿಕ್ರಮ್

ಪಿಟಿಐ
Published 3 ಜುಲೈ 2023, 5:28 IST
Last Updated 3 ಜುಲೈ 2023, 5:28 IST
   

ಹೈದರಾಬಾದ್: ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ ಮತ್ತು ಚಲನಚಿತ್ರ ನಿರ್ದೇಶಕ ತ್ರಿವಿಕ್ರಮ್ ತಮ್ಮ ನಾಲ್ಕನೇ ಚಿತ್ರಕ್ಕೆ ಸಿದ್ಧರಾಗಿದ್ದಾರೆ ಎಂದು ನಿರ್ಮಾಪಕರು ಸೋಮವಾರ ಘೋಷಿಸಿದ್ದಾರೆ.

ಇನ್ನೂ ಹೆಸರಿಡದ ಚಿತ್ರ ಅಲ್ಲು ಅರವಿಂದ್ ಮತ್ತು ಎಸ್ ರಾಧಾ ಕೃಷ್ಣ ಅವರ ಗೀತಾ ಆರ್ಟ್ಸ್ ಮತ್ತು ಹರಿಕಾ ಅಂಡ್ ಹಾಸನ್ ಕ್ರಿಯೇಷನ್ಸ್ ಬ್ಯಾನರ್‌ಗಳ ಅಡಿಯಲ್ಲಿನಿರ್ಮಾಣವಾಗುತ್ತಿದೆ.

ಈ ಕುರಿತಂತೆ ಗೀತಾ ಆರ್ಟ್ಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ADVERTISEMENT

‘ಡೈನಾಮಿಕ್ ಜೋಡಿ ಹಿಂದಿರುಗಿದೆ! ಐಕಾನ್ ಸ್ಟಾರ್ ಅಲ್ಲುಅರ್ಜುನ್ ಮತ್ತು ಬ್ಲಾಕ್‌ಬಸ್ಟರ್ ನಿರ್ದೇಶಕ ತ್ರಿವಿಕ್ರಮ್ ತಮ್ಮ 4ನೇ ಚಿತ್ರಕ್ಕಾಗಿ ಮತ್ತೆ ಒಂದಾಗುತ್ತಾರೆ! ಹೆಚ್ಚಿನ ವಿವರಗಳು ಶೀಘ್ರದಲ್ಲೇ! ಬಿಡುಗಡೆಯಾಗಲಿವೆ’ ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ.

ಅಲ್ಲು ಅರ್ಜುನ್ ಮತ್ತು ತ್ರಿವಿಕ್ರಮ್ 2012ರಲ್ಲಿ ಮೊದಲ ಬಾರಿಗೆ ‘ಜುಲಾಯಿ’ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. 2015ರಲ್ಲಿ ‘S/O ಸತ್ಯಮೂರ್ತಿ’, ಬಳಿಕ, 2020ರಲ್ಲಿ ‘ಅಲಾ ವೈಕುಂಠಪುರಮುಲೊ’ ಸೂಪರ್ ಹಿಟ್ ಚಿತ್ರಗಳ ಮೂಲಕ ಈ ಜೋಡಿ ಹೆಸರು ಮಾಡಿತ್ತು.

ಈ ಸಕ್ಸಸ್‌ಫುಲ್ ಜೋಡಿಯ ನಾಲ್ಕನೇ ಚಿತ್ರವು ‘ದೃಶ್ಯ ಚಮತ್ಕಾರ’ದಿಂದ ಕೂಡಿರುತ್ತದೆ ಎಂದು ನಿರ್ಮಾಪಕರು ಹೇಳಿದ್ದಾರೆ.

ಅಲ್ಲು ಅರ್ಜುನ್ ಅವರು, ಸದ್ಯ ಬಹುನಿರೀಕ್ಷಿತ ‘ಪುಷ್ಪ: ದಿ ರೂಲ್’ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.