ಚೆನ್ನೈ: ಗಾನಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣಂ ಅವರ ಅಂತಿಮ ವಿಧಿವಿಧಾನ ತಮಿಳುನಾಡಿನ ತಿರುವಳ್ಳೂರ್ನತಾಮರೈಪಕ್ಕಂನಲ್ಲಿರುವ ರೆಡ್ ಹಿಲ್ಸ್ ಫಾರ್ಮ್ಹೌಸ್ನಲ್ಲಿ ಜರುಗಿತು.
ಇದಕ್ಕೂ ಮೊದಲುಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅಭಿಮಾನಿಗಳು, ಪ್ರಮುಖರು ಶುಕ್ರವಾರ ಫಾರ್ಮ್ ಹೌಸ್ ಬಳಿ ಮುಗಿಬಿದ್ದಿದ್ದರು.
ಕೋವಿಡ್-19ರಿಂದ ಮೃತಪಟ್ಟಿದ್ದ ಹಿರಿಯ ಗಾಯಕನ ಅಂತಿಮ ದರ್ಶನಕ್ಕೆ ಇದ್ದ ನಿಬಂಧನೆಗಳ ನಡುವೆಯೂಹೆಸರಾಂತ ವ್ಯಕ್ತಿಗಳು, ಸಾಮಾನ್ಯರು, ಅಭಿಮಾನಿಗಳು ಫಾರ್ಮ್ ಹೌಸ್ ಬಳಿ ಗುಂಪುಗೂಡಿದ್ದರು.
ಮುಂಜಾಗ್ರತೆಯಾಗಿ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಲಾಗಿತ್ತು. ಸಾಲುಗಟ್ಟಿ ಬಂದ ಅಭಿಮಾನಿಗಳು ಎಸ್.ಪಿ.ಬಿ ಅವರ ಶರೀರದ ಅಂತಿಮ ದರ್ಶನ ಪಡೆದರು.
ಆಂಧ್ರಪ್ರದೇಶದ ನೀರಾವರಿ ಸಚಿವ ಅನಿಲ್ ಕುಮಾರ್ ಯಾದವ್, ತಿರುವಳ್ಳುರ ಜಿಲ್ಲಾಧಿಕಾರಿ ಮಗೇಶ್ವರಿ ರವಿಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಅರವಿಂದನ್, ಚಿತ್ರ ನಿರ್ದೇಶಕ ಭಾರತಿರಾಜಾ, ಸಂಗೀತ ನಿರ್ದೇಶಕ ದೇವಿಶ್ರೀಪ್ರಸಾದ್, ಹಾಸ್ಯ ನಟ ಮಯಿಲ್ ಸಾಮಿ ಸೇರಿ ಹಲವರು ಅಂತಿಮ ನಮನ ಸಲ್ಲಿಸಿದರು.
ಅಭಿಮಾನಿಗಳ ಗುಂಪು ತಡೆಯಲು ಬ್ಯಾರಿಕೇಡ್ ಅಳವಡಿಸಲಾಗಿತ್ತು. ನಿಯೋಜಿತ ಸ್ಥಳದಲ್ಲಿ ಮಾತ್ರವೇ ವಾಹನಗಳ ನಿಲುಗಡೆಗೆ ಅವಕಾಶ ನೀಡಲಾಗಿತ್ತು. ಮಧ್ಯಾಹ್ನ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದ್ದು, ಪುತ್ರ ಚರಣ್ ನಡೆಸಿಕೊಡುವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.