ನಿತೇಶ್ ತಿವಾರಿ ಅವರ ಭಾರಿ ಮಹಾತ್ವಾಕಾಂಕ್ಷೆಯ ಸಿನಿಮಾ ‘ರಾಮಾಯಣ’ ದಲ್ಲಿ ರಾವಣ ಪಾತ್ರವನ್ನು ನಿರ್ವಹಿಸುವಂತೆ ಪ್ರಭಾಸ್ ಅವರನ್ನು ಕೇಳಿದ್ದಾರೆ ಎಂಬ ಸುದ್ದಿ ಬಾಲಿವುಡ್ನಲ್ಲಿ ಹರಿದಾಡುತ್ತಿದೆ.
ಪ್ರಭಾಸ್ ಈ ಪಾತ್ರವನ್ನು ಒಪ್ಪಿಕೊಳ್ಳಲಿದ್ದಾರೆಯೇ ಎಂಬ ಕುತೂಹಲ ಈಗ ಎಲ್ಲರದ್ದು.‘ಸಾಹೋ ’ ಚಿತ್ರದ ಬಿಡುಗಡೆ ಬಳಿಕ ನಟ ಪ್ರಭಾಸ್ ಕೆ.ಕೆ. ರಾಧಾಕೃಷ್ಣ ಅವರ ಹಾಸ್ಯಪ್ರಧಾನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ನಾಯಕಿ ಪೂಜಾ ಹೆಗ್ಡೆ.ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪ್ರಭಾಸ್, ‘ಅತಿ ಹೆಚ್ಚು ಬಂಡವಾಳದ ಸಿನಿಮಾಗಳಿಂದ ನಾನು ಬಸವಳಿದಿದ್ದೇನೆ. ಆ ಸಿನಿಮಾಗಳು ಮುಗಿಯಲು ಬಹಳ ವರ್ಷಗಳನ್ನೇ ತೆಗೆದುಕೊಳ್ಳುತ್ತವೆ’ ಎಂದು ಹೇಳಿಕೊಂಡಿದ್ದರು.
ಆದರೆ ಪ್ರಭಾಸ್ ಅವರನ್ನು ಇಂತಹ ದೊಡ್ಡ ದೊಡ್ಡ ಸಿನಿಮಾಗಳೇ ಅರಸಿಕೊಂಡು ಬರುತ್ತಿವೆ. ಪೌರಾಣಿಕ ಸಿನಿಮಾ ‘ರಾಮಾಯಣ’ದಲ್ಲಿ ರಾವಣ ಪಾತ್ರ ಮಾಡುವಂತೆ ಪ್ರಭಾಸ್ ಅವರನ್ನು ಚಿತ್ರತಂಡ ಭೇಟಿ ಮಾಡಿ ಕೇಳಿಕೊಂಡಿದೆ ಎಂಬ ಸುದ್ದಿ ಕೇಳಿಬಂದಿದೆ.ಈ ಚಿತ್ರದಲ್ಲಿ ರಾಮನಾಗಿ ಹೃತಿಕ್ ರೋಷನ್ ನಟಿಸಲಿದ್ದು, ಸೀತೆಯಾಗಿ ದೀಪಿಕಾ ಪಡುಕೋಣೆ ಅಭಿನಯಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.