ADVERTISEMENT

ಕನ್ನಡ ಚಿತ್ರರಂಗಕ್ಕೆ ಮೇಟಿ ಇಲ್ಲದಿರುವುದೇ ಸಮಸ್ಯೆ: ನಿರ್ಮಾಪಕ ಸಂದೇಶ್ ನಾಗರಾಜ್

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2020, 8:45 IST
Last Updated 4 ಸೆಪ್ಟೆಂಬರ್ 2020, 8:45 IST
ನಿರ್ಮಾಪಕ ಸಂದೇಶ್ ನಾಗರಾಜ್
ನಿರ್ಮಾಪಕ ಸಂದೇಶ್ ನಾಗರಾಜ್   

ಮೈಸೂರು: ಕನ್ನಡ ಚಿತ್ರರಂಗಕ್ಕೆ ಯಾರೂ ಮೇಟಿ ಇಲ್ಲದಿರುವುದೇ ಈಚೆಗಿನ ಬೆಳವಣಿಗೆಗೆ ಕಾರಣ ಎಂದು ನಿರ್ಮಾಪಕ ಸಂದೇಶ್ ನಾಗರಾಜ್ ಬೇಸರ ವ್ಯಕ್ತಪಡಿಸಿದರು.

ಡ್ರಗ್ಸ್ ದಂಧೆಯಲ್ಲಿ ಸ್ಯಾಂಡಲ್ ವುಡ್ ನಂಟು ಆರೋಪ ಕುರಿತು ಮೈಸೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, ಕನ್ನಡ ಚಿತ್ರರಂಗಕ್ಕೆ ಮೇಟಿ ಇಲ್ಲದಿರುವುದೇ ಇಂತ ಸಮಸ್ಯೆಗೆ ಕಾರಣ. ಡಾ. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಷ್ ಇದ್ದಾಗ ಒಂದು ಭಯ ಇತ್ತು. ಅವರ ಮೇಲಿನ ಗೌರವಕ್ಕೆ ಹೆದರಿ ಯಾರು ದಾರಿ ತಪ್ಪಿರಲಿಲ್ಲ. ಈಗ ಮೇಟಿ ಇಲ್ಲದಿರುವುದೇ ಇಷ್ಟಕ್ಕೆಲ್ಲ ಕಾರಣವಾಗಿದೆ ಎಂದರು.

ಈಗ ಶಿವರಾಜ್‍ ಕುಮಾರ್ ನೇತೃತ್ವ ವಹಿಸಿಕೊಳ್ಳುತ್ತಿದ್ದಾರೆ. ಅವರಿಗಾದರೂ ಎಲ್ಲರೂ ಗೌರವ ಕೊಟ್ಟು ಚಿತ್ರರಂಗದ ಹೆಸರು ಉಳಿಸಿ. ಶಿವರಾಜ್‍ಕುಮಾರ್ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗೋ ವಿಶ್ವಾಸ ಇದೆ ಎಂದು ಸಂದೇಶ್ ನಾಗರಾಜ್ ಹೇಳಿದರು.

ADVERTISEMENT

ಡ್ರಗ್ಸ್ ತೆಗೆದುಕೊಳ್ಳುವವರ ಹೆಸರನ್ನು ನೇರವಾಗಿ ಹೇಳಲಿ... ಡ್ರಗ್ವಿಚಾರದಲ್ಲಿ ಇಡೀ ಚಿತ್ರರಂಗ ಎಂದು ಹೇಳುವುದು ಸರಿಯಲ್ಲ. ಈ ಬಗ್ಗೆ ನಾನು ಇಂದ್ರಜಿತ್ ಅವರನ್ನು ಕೇಳ್ತೇನೆ. ನೇರವಾಗಿ ಹೆಸರು ಹೇಳಿಬಿಡಿ. ಅಲ್ಲಿಗೆ ಚಿತ್ರರಂಗದ ಮೇಲಿನ ಕಳಂಕ ತಪ್ಪಲಿದೆ. ಕನ್ನಡ ಚಿತ್ರರಂಗದಲ್ಲಿ ಹಲವು ಹಿರೋ, ಹಿರೋಯಿನ್‌ಗಳು ಇದ್ದಾರೆ. ಅವರೆಲ್ಲ ಡ್ರಗ್ಸ್ ತೆಗೆದುಕೊಳ್ತಾರೆ ಅನ್ನೋದು ಸುಳ್ಳು. ಯಾರೋ ಶೇ 1ರಷ್ಟು ಜನ ತೆಗೆಕೊಳ್ಳಬಹುದು. ಯಾರೋ ತೆಗೆದುಕೊಳ್ಳೊ ಬಗ್ಗೆ ಮಾಹಿತಿ ಇದ್ರೆ ನೇರವಾಗಿ ಅವರ ಬಗ್ಗೆ ಮಾಹಿತಿ ನೀಡಲಿ ಎಂದು ಆಗ್ರಹಿಸಿದರು.

ನಾನು 30 ಚಿತ್ರ ನಿರ್ಮಾಣ ಮಾಡಿದ್ದೇನೆ. ನನಗೆ ಈ ಅನುಭವ ಆಗಿಲ್ಲ. ಇಂದ್ರಜಿತ್ ಅವರಿಗೆ ಮಾಹಿತಿ, ಸಾಕ್ಷಿ ಇದ್ರೆ ಆರೋಪಿಗಳ ಹೆಸರು ಓಪನ್ ಆಗಿ ಹೇಳಲಿ. ಡ್ರಗ್ಸ್ ತೆಗೆದುಕೊಂಡರೆ ಅದು ಅವರ ವೈಯುಕ್ತಿಕ.

ಚಿತ್ರರಂಗದವರೋಬ್ಬರೇ ಡ್ರಗ್ಸ್ ತೆಗೆದುಕೊಳ್ಳಲ್ಲ. ಎಲ್ಲರೂ ತೆಗೆದು ಕೊಳ್ಳುತಾರೆ. ಯಾರು ಇಂತಹ ಕೆಲಸ ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಲಿ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.