ADVERTISEMENT

‘ಬ್ಯಾಚುಲರ್‌ ಪಾರ್ಟಿ’ ಮಾಡಿದ ರಕ್ಷಿತ್‌ ಶೆಟ್ಟಿ!

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 8:27 IST
Last Updated 6 ಸೆಪ್ಟೆಂಬರ್ 2022, 8:27 IST
ನಟ ರಕ್ಷಿತ್‌ ಶೆಟ್ಟಿ
ನಟ ರಕ್ಷಿತ್‌ ಶೆಟ್ಟಿ   

ನಟ ರಕ್ಷಿತ್‌ ಶೆಟ್ಟಿ, ತಮ್ಮ ಪರಂವಃ ಸ್ಟುಡಿಯೋಸ್‌ನಡಿ ನಿರ್ಮಾಪಕರಾಗಿ ಸಾಲು ಸಾಲು ಚಿತ್ರನಿರ್ಮಾಣಕ್ಕೆ ಇಳಿದಿದ್ದಾರೆ. ಇತ್ತೀಚೆಗಷ್ಟೇ ಚಂದ್ರಜಿತ್‌ ಬೆಳ್ಳಿಯಪ್ಪ ನಿರ್ದೇಶನದ ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾ ಘೋಷಿಸಿದ್ದ ಪರಂವಃ, ಇದೀಗ ‘ಬ್ಯಾಚುಲರ್‌ ಪಾರ್ಟಿ’ ಮಾಡಲು ಸಜ್ಜಾಗಿದೆ.

ರಕ್ಷಿತ್, ಕೇವಲ ನಾಯಕರಾಗಿಯಷ್ಟೇ ಅಲ್ಲದೆ ನಿರ್ಮಾಪಕರಾಗಿಯೂ ಜನಪ್ರಿಯರಾಗುತ್ತಿದ್ದಾರೆ. ಪರಂವಃ ಸ್ಟುಡಿಯೋಸ್ ಮೂಲಕ ಯುವಪ್ರತಿಭೆಗಳಿಗೆ ಅವಕಾಶ ನೀಡುತ್ತಾ ಬಂದಿದ್ದಾರೆ ರಕ್ಷಿತ್‌. ಪರಂವಃದ ಹೊಸ ಚಿತ್ರಗಳಾದ ‘ಬ್ಯಾಚುಲರ್ ಪಾರ್ಟಿ’ ಹಾಗೂ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರಗಳ ಮುಹೂರ್ತ ಸಮಾರಂಭ ಇತ್ತೀಚೆಗೆ ಧರ್ಮಗಿರಿ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ನಡೆಯಿತು.

‘ನಮ್ಮ 7 ಆಡ್ಸ್‌ ತಂಡದ ಸದಸ್ಯರು ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ ಎನ್ನುವುದು ಖುಷಿಯ ವಿಚಾರ. ಕಿರಣ್‌ರಾಜ್‌ ಬಳಿಕ ಇದೀಗ ಚಂದ್ರಜಿತ್‌ ಬೆಳ್ಳಿಯಪ್ಪ ಹಾಗೂ ಅಭಿಜಿತ್‌ ಮಹೇಶ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಅಭಿಜಿತ್‌ ಮಹೇಶ್‌ ನನಗೆ ಕಿರುಚಿತ್ರಗಳನ್ನು ಮಾಡುತ್ತಿರುವಾಗಲೇ ಪರಿಚಯ. ನಂತರದಲ್ಲಿ ಇವರು ‘ಕಿರಿಕ್‌ ಪಾರ್ಟಿ’, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’, ‘ಅವನೇ ಶ್ರೀಮನ್ನಾರಾಯಣ’ ಸಿನಿಮಾದಲ್ಲಿ ಕೆಲಸ ಮಾಡಿದ್ದರು. ‘ಕಿರಿಕ್‌ ಪಾರ್ಟಿ’ ಸಿನಿಮಾ ಕಾಲೇಜಿನ ವಾತಾವರಣದಲ್ಲಿ ನಡೆದಿತ್ತು, ‘ಬ್ಯಾಚುಲರ್‌ ಪಾರ್ಟಿ’ ಸಿನಿಮಾ ಬ್ಯಾಂಕಾಕ್‌ನಲ್ಲಿ ನಡೆಯಲಿದೆ. ಇದೊಂದು ಹಾಸ್ಯಪ್ರಧಾನ ಚಿತ್ರ. ಅಭಿಜಿತ್‌ ಮಹೇಶ್‌ ಸಂಭಾಷಣೆ ಸಂಪೂರ್ಣ ಹಾಸ್ಯದಿಂದ ಕೂಡಿರುತ್ತದೆ. ಪರಂವಃ ಸ್ಟುಡಿಯೋಸ್‌ ಬ್ಯಾನರ್‌ನಡಿ ರಿಷಬ್‌ ಶೆಟ್ಟಿ ಮೊದಲ ಬಾರಿ ನಟಿಸುತ್ತಿದ್ದಾರೆ’ಎಂದರುರಕ್ಷಿತ್‌ಶೆಟ್ಟಿ.

ADVERTISEMENT

‘ಸಂಬಂಧ ಮತ್ತು ಸ್ನೇಹವನ್ನು ಆಧರಿಸಿದ ಸ್ವಚ್ಛ ಹಾಸ್ಯದ ಸಿನಿಮಾ ಇದು. ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ನಂತರ ಥಾಯ್ಲೆಂಡ್‌,ತಾರಾಬಳಗದಲ್ಲಿ ಸಿರಿ ರವಿಕುಮಾರ್, ಜಯಲಕ್ಷ್ಮಿ, ಪ್ರಕಾಶ್ ತುಮ್ಮಿನಾಡ್‌ ಮುಂತಾದವಿರದ್ದಾರೆ’ ಎಂದರು ಅಭಿಜಿತ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.