ಶಿಮ್ಲಾ: ಸಾರಾಭಾಯ್ Vs ಸಾರಾಭಾಯ್ ಧಾರವಾಹಿ ಖ್ಯಾತಿಯ ನಟಿ ವೈಭವಿ ಉಪಾಧ್ಯಾಯ (30) ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ಬಂಜಾರ್ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ.
ತಮ್ಮ ಗೆಳೆಯನ ಜತೆ ಪ್ರಯಾಣಿಸುತ್ತಿದ್ದ ವೇಳೆ, ಕಡಿದಾದ ತಿರುವಿನಲ್ಲಿ ಮುನ್ನಡೆಸುವ ವೇಳೆ ಕಾರು ಆಳವಾದ ಕಮರಿಗೆ ಬಿದ್ದಿದೆ.
ಕಾರಿನ ಕಿಟಕಿ ಗಾಜು ಮುರಿದು ವೈಭವಿ ಅವರು ಹೊರಬರಲು ಪ್ರಯತ್ನಿಸಿದ್ದಾರೆ, ಈ ವೇಳೆ ಅವರ ತಲೆಗೆ ಗಾಯವಾಗಿದ್ದು, ಮಾರಣಾಂತಿಕವಾಗಿ ಪರಿಣಮಿಸಿದೆ ಎಂದು ಕುಲು ಜಿಲ್ಲೆಯ ಎಸ್ಪಿ ಸಾಕ್ಷಿ ವರ್ಮಾ ಅವರು ಹೇಳಿದ್ದಾರೆ.
ವೈಭವಿ ಅವರ ಅಂತಿಮ ವಿಧಿ ವಿಧಾನಗಳು ಮುಂಬೈನಲ್ಲಿ ನಡೆಯಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನಟಿಯ ಅಗಲಿಕೆಗೆ ಹಲವರು ಕಂಬನಿ ಮಿಡಿದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.