ADVERTISEMENT

ನಾಗ ಚೈತನ್ಯ–ಸಮಂತಾ ವಿಚ್ಛೇದನದ ಬಗ್ಗೆ ನಾನು ಮಾತಾಡಿಲ್ಲ: ನಾಗಾರ್ಜುನ ಸ್ಪಷ್ಟನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜನವರಿ 2022, 15:26 IST
Last Updated 27 ಜನವರಿ 2022, 15:26 IST
ನಾಗಾರ್ಜುನ, ನಾಗಚೈತನ್ಯ, ಸಮಂತಾ
ನಾಗಾರ್ಜುನ, ನಾಗಚೈತನ್ಯ, ಸಮಂತಾ    

ಹೈದರಾಬಾದ್‌: ‘ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು ವಿಚ್ಛೇದನದ ಕುರಿತು ನಾಗಾರ್ಜುನ ಅವರು ಮೌನ ಮುರಿದಿದ್ದಾರೆ’ ಎಂಬ ವರದಿಗಳನ್ನು ನಟ ನಾಗಾರ್ಜುನ ಅವರೇ ನಿರಾಕರಿಸಿದ್ದಾರೆ.

‘ನನ್ನ ಹೇಳಿಕೆಯನ್ನು ಉಲ್ಲೇಖಿಸಿದ ಎಲೆಕ್ಟ್ರಾನಿಕ್‌ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿನ ವರದಿಗಳು ಸಂಪೂರ್ಣ ಸುಳ್ಳು ಮತ್ತು ಅಸಂಬದ್ಧ. ವದಂತಿಗಳನ್ನು ಸುದ್ದಿಯಾಗಿ ವರದಿ ಮಾಡದಂತೆ ಮಾಧ್ಯಮ ಮಿತ್ರರನ್ನು ನಾನು ವಿನಂತಿಸುತ್ತೇನೆ’ ಎಂದು ಅವರು ಟ್ವೀಟ್‌ ಮಾಡಿ ಸ್ಪಷ್ಟನೆ ನೀಡಿದ್ದಾರೆ.

ಮೊದಲು ವಿಚ್ಛೇದನ ಕೇಳಿದ್ದು ಸಮಂತಾ ಅವರೇ ಎಂದು ನಾಗಾರ್ಜುನ ಅವರು ಹೇಳಿದ್ದಾರೆ ಎಂದು ಈ ಮೊದಲು ವರದಿಯಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.