ADVERTISEMENT

BBK12 | ಏಕಾಏಕಿ ಧನುಷ್ ಮೇಲೆ ಚಂದ್ರಪ್ರಭ ಗರಂ: ಅಸಲಿಗೆ ಇಬ್ಬರ ಮಧ್ಯೆ ಆಗಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಅಕ್ಟೋಬರ್ 2025, 5:23 IST
Last Updated 3 ಅಕ್ಟೋಬರ್ 2025, 5:23 IST
<div class="paragraphs"><p>ಕಾಕ್ರೋಜ್ ಸುಧಿ, ಧನುಷ್‌ ಗೌಡ,&nbsp;ಚಂದ್ರಪ್ರಭ</p></div>

ಕಾಕ್ರೋಜ್ ಸುಧಿ, ಧನುಷ್‌ ಗೌಡ, ಚಂದ್ರಪ್ರಭ

   

ಚಿತ್ರ: ಕಲರ್ಸ್ ಕನ್ನಡ ಇನ್‌ಸ್ಟಾಗ್ರಾಮ್

ಕನ್ನಡದ ಬಿಗ್‌ಬಾಸ್‌ 12ನೇ ಆವೃತ್ತಿ ಶುರುವಾಗಿ ಇನ್ನು ಒಂದು ವಾರವೂ ಕಳೆದಿಲ್ಲ. ಅಷ್ಟರಲ್ಲೇ ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ದೊಡ್ಡ ಗಲಾಟೆಯೇ ನಡೆದು ಹೋಗಿದೆ. ನಿನ್ನೆಯ ಸಂಚಿಕೆಯಲ್ಲಿ ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ನಟ, ಕಾವ್ಯ, ಅಶ್ವಿನಿ ಗೌಡ ನಡುವೆ ಜಗಳ ನಡೆದಿತ್ತು. ಆದರೆ ಇವತ್ತಿನ ಸಂಚಿಕೆಯಲ್ಲಿ ಚಂದ್ರಪ್ರಭ ಏಕಾಏಕಿ ಧನುಷ್‌ ಮೇಲೆ ಸಿಟ್ಟಾಗಿದ್ದಾರೆ.

ADVERTISEMENT

ಚಿತ್ರ: ಕಲರ್ಸ್ ಕನ್ನಡ ಇನ್‌ಸ್ಟಾಗ್ರಾಮ್

ಕಲರ್ಸ್ ಕನ್ನಡ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಹಂಚಿಕೊಂಡಿದೆ. ಅದರಲ್ಲಿ ಬಿಗ್‌ಬಾಸ್‌ ಕೊಟ್ಟ ಟಾಸ್ಕ್ ವಿಚಾರಕ್ಕೆ ಗಲಾಟೆ ನಡೆದಿದೆ. ಬಿಗ್‌ಬಾಸ್‌ ನೀಡಿದ ಟಾಸ್ಕ್‌ ಬಗ್ಗೆ ಯಾವೊಬ್ಬ ಸ್ಪರ್ಧಿಯೂ ಸರಿಯಾಗಿ ಅರ್ಥ ಮಾಡಿಕೊಂಡಿರಲಿಲ್ಲಿ. ಇದರಿಂದ ಬೇಸರಗೊಂಡ ಬಿಗ್‌ಬಾಸ್‌ ಗೇಮ್ ಅನ್ನು ರದ್ದು ಮಾಡಿ ಆದೇಶ ಹೊರಡಿಸಿದ್ದಾರೆ.

ಇದೇ ವೇಳೆ ಧನುಷ್ ಮೇಲೆ ಕಾಕ್ರೋಚ್ ಕೋಪಗೊಂಡಿದ್ದಾರೆ. ಇದಾದ ಬಳಿಕ ಚಂದ್ರಪ್ರಭ ಕೂಡ ಧನುಷ್ ಮೇಲೆ ಗರಂ ಆಗಿದ್ದಾರೆ. ಮಾತಿನ ಭರದಲ್ಲಿ ಚಂದ್ರಪ್ರಭ, ‘ಧನುಷ್ ಅವರಿಗೆ ಅವರೇ ಹೀರೋ ಅಂದುಕೊಂಡು ಬಿಟ್ಟಿದ್ದಾರಾ? ಹಾಗಿದ್ದರೆ ನಾವೆಲ್ಲಾ ಏನು’ ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಇಬ್ಬರ ಮಧ್ಯೆ ವಾಗ್ಯುದ್ಧ ನಡೆದಿದೆ. ಇದಾದ ಬಳಿಕ ಏನೆಲ್ಲಾ ಆಯ್ತು ಎಂಬುವುದರ ಬಗ್ಗೆ ಇಂದು ರಾತ್ರಿ ಪ್ರಸಾರವಾಗುವ ಸಂಚಿಕೆಯಲ್ಲಿ ತಿಳಿದು ಬರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.