ADVERTISEMENT

ಭುವನೇಶ್ವರ: ಲಾಕ್‌ಡೌನ್‌ ವೇಳೆ ರಾಮಾಯಣ ಬರೆದ 10 ವರ್ಷದ ಬಾಲಕ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2021, 7:15 IST
Last Updated 28 ಫೆಬ್ರುವರಿ 2021, 7:15 IST
ಚಿತ್ರ: ಬಿ.ಕೆ.ಎಸ್‌. ವರ್ಮಾ (ಪ್ರಾತಿನಿಧಿಕ ಚಿತ್ರ)
ಚಿತ್ರ: ಬಿ.ಕೆ.ಎಸ್‌. ವರ್ಮಾ (ಪ್ರಾತಿನಿಧಿಕ ಚಿತ್ರ)   

ಭುವನೇಶ್ವರ: ಕೋವಿಡ್-19 ಲಾಕ್‌ಡೌನ್‌ಸಂದರ್ಭದಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ಧಾರಾವಾಹಿ ವೀಕ್ಷಿಸಿದ ಒಡಿಶಾದ ಆಯುಷ್‌ ಕುಮಾರ್‌ ಕುಂಟಿಯಾ (10) ಎಂಬ ಬಾಲಕʼರಾಮಾಯಣʼ ಕೃತಿ ರಚಿಸಿ ಅಚ್ಚರಿ ಮೂಡಿಸಿದ್ದಾನೆ.

104 ಪುಟಗಳ ಈ ಕೃತಿಯು ಒಡಿಶಾ ಭಾಷೆಯಲ್ಲಿದ್ದು, ಪಿಲಾಕ ರಾಮಾಯನ (ಮಕ್ಕಳ ರಾಮಾಯಣ) ಎಂದು ಹೆಸರಿಡಲಾಗಿದೆ.

ಈ ಬಗ್ಗೆ ಮಾತನಾಡಿರುವ ಆಯುಷ್‌, ʼಲಾಕ್‌ಡೌನ್‌ ಸಂದರ್ಭದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುವ ರಾಮಾಯಣ ವೀಕ್ಷಿಸುವಂತೆ ಹಾಗೂ ಬಳಿಕ ಅದರ ಬಗ್ಗೆ ಏನಾದರು ಬರೆಯುವಂತೆ ನನ್ನ ಚಿಕ್ಕಪ್ಪ ಮಾರ್ಚ್‌ನಲ್ಲಿ ಸಲಹೆ ನೀಡಿದ್ದರುʼ

ADVERTISEMENT

ʼಅದರಂತೆ, ದೂರದರ್ಶನದಲ್ಲಿ ಪ್ರಸಾರವಾದ ರಾಮಾಯಣ ಧಾರಾವಾಹಿ ವೀಕ್ಷಿಸಿದೆ ಮತ್ತು ಪ್ರತಿಯೊಂದು ಸಂಚಿಕೆಯ ಬಗ್ಗೆ ನೋಟ್‌ಬುಕ್‌ನಲ್ಲಿ ಬರೆದೆ. ಬಳಿಕ ಈ ಪುಸ್ತಕವನ್ನು ಪೂರ್ಣಗೊಳಿಸಲು ಎರಡು ತಿಂಗಳು ಬೇಕಾಯಿತುʼ ಎಂದು ತಿಳಿಸಿದ್ದಾನೆ.

ಮುಂದುವರಿದು, ʼಶ್ರೀರಾಮ 14 ವರ್ಷಗಳ ವನವಾಸಕ್ಕೆ ತೆರಳಿದ್ದು, ಸೀತಾದೇವಿಯನ್ನು ರಾವಣ ಅಪಹರಿಸಿದ್ದೂ ಸೇರಿದಂತೆ ರಾಮಾಯಣದಹಲವು ಪ್ರಮುಖ ಕಥನಗಳನ್ನು ಬರೆದಿದ್ದೇನೆ. ಜೊತೆಗೆ ರಾಮ ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದಾಗ ಜನರು ಆತನನ್ನು ಸ್ವಾಗತಿಸಿದ ಬಗೆಯನ್ನು ವಿವರಿಸಿದ್ದೇನೆʼ ಎಂದು ಹೇಳಿಕೊಂಡಿದ್ದಾನೆ.

ಜೀವನದಲ್ಲಿ ಹೊಸ ಎತ್ತರವನ್ನು ತಲುಪಲುಪ್ರತಿಯೊಬ್ಬರೂ ಓದುವ ಮತ್ತು ಬರೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದೂ ಜನರನ್ನುಒತ್ತಾಯಿಸಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.