ADVERTISEMENT

ದ್ವೇಷ ಭಾಷಣವೇ ದೆಹಲಿ ಸೋಲಿಗೆ ಕಾರಣ: ಅಮಿತ್‌ ಶಾ  

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 4:32 IST
Last Updated 14 ಫೆಬ್ರುವರಿ 2020, 4:32 IST
ಅಮಿತ್‌ ಶಾ
ಅಮಿತ್‌ ಶಾ   

ನವದೆಹಲಿ: ‘ಚುನಾವಣೆ ಎದುರಿಗೆ ಇಟ್ಟುಕೊಂಡು ಪಕ್ಷದ ಕೆಲ ನಾಯಕರು ದ್ವೇಷ ಭಾಷಣ ಮಾಡಬಾರದಾಗಿತ್ತು. ಅವರ ಮಾತುಗಳೇ ದೆಹಲಿಯಲ್ಲಿ ಪಕ್ಷಕ್ಕೆ ಇದ್ದ ಅವಕಾಶವನ್ನು ಚಿವುಟಿ ಹಾಕಿದವು’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಹೇಳಿಕೊಂಡಿದ್ದಾರೆ.

ದೆಹಲಿಯಲ್ಲಿ ನಡೆದ ‘ಟೈಮ್ಸ್‌ ನೌ ಸಮಿಟ್‌– 2020’ ಕಾರ್ಯಕ್ರಮದಲ್ಲಿಭಾಗವಹಿಸಿದ್ದಅವರು, ದೆಹಲಿ ಸೋಲಿನ ಬಗ್ಗೆ ಮಾತನಾಡಿದ್ದಾರೆ.

‘... ಮನೆಗೆ ನುಗ್ಗಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಅತ್ಯಾಚಾರ ಮಾಡಬಹುದು’ಎಂಬ ಮಾತನ್ನು ಪಕ್ಷದ ಯಾರೂ ಆಡಿರಲಿಲ್ಲ. ಆದರೆ, ‘ಗುಂಡು ಹೊಡೆಯಿರಿ’, ‘ಚುನಾವಣೆ ಭಾರತ–ಪಾಕ್‌ ಪಂದ್ಯ’ ಎಂಬ ಮಾತುಗಳನ್ನು ಆಡಬಾರದಾಗಿತ್ತು. ಪಕ್ಷ ಇದರಿಂದ ಕೂಡಲೇ ಅಂತರ ಕಾಯ್ದುಕೊಳ್ಳುವಂತಾಯಿತು’ ಎಂದು ಅಮಿತ್‌ ಶಾ ಹೇಳಿದ್ದಾರೆ.

ADVERTISEMENT

‘ಯಾರು ಏನೇ ಹೇಳಬಹುದು. ಆದರೆ, ನಮ್ಮ ಪಕ್ಷ ಏನು ಎಂದು ಜನರಿಗೆ ಗೊತ್ತಿತ್ತು. ಆದರೂ, ಇದು ನಮ್ಮ ಪಕ್ಷ ಮಾಡುವಂಥ ಸಾಧನೆಯಲ್ಲ. ದ್ವೇಷ ಬಾಷಣಗಳೇ ಈ ಫಲಿತಾಂಶಕ್ಕೆ ಕಾರಣ. ಜನರು ಏನನ್ನು ನೋಡಿ ಮತ ಚಲಾಯಿಸಿದ್ದಾರೆ ಎಂದು ಕೈ ಬರಹದಲ್ಲಿ ಬರೆದುಕೊಟ್ಟಂತೆ ಹೇಳಲು ಸಾಧ್ಯವಿಲ್ಲ. ಆದರೆ, ನಮ್ಮ ಸೋಲಿಗೆ ದ್ವೇಷ ಭಾಷಣವೂ ಕಾರಣವಿರಬಹುದು’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

‘ಈ ಬಾರಿ ನಮಗೆ ಬಹುಮತ ಬರುತ್ತದೆ ಎಂದು ನಾನು ಲೆಕ್ಕ ಹಾಕಿದ್ದೆ. ಆದರೆ, ಈ ಫಲಿತಾಂಶ ಒಪ್ಪಿಕೊಳ್ಳಲು ನನಗೆ ಯಾವ ಹಿಂಜರಿಕೆ ಇಲ್ಲ. ಹಲವು ಸಂದರ್ಭಗಳಲ್ಲಿ ನನ್ನ ಲೆಕ್ಕ ಸರಿಯಾಗಿಯೇ ಇರುತ್ತೆ.ಆದರೆ, ಈ ಬಾರಿ ತಪ್ಪಾಗಿದೆ’ ಎಂದು ಅಮಿತ್ ಶಾ ವಿಷಾದದ ದನಿಯಲ್ಲಿ ಮತನಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.