ADVERTISEMENT

ಉತ್ತರ ಪ್ರದೇಶದ ರೈತರ ಸಾಲ ಮನ್ನಾ, ಕಬ್ಬು ಬಾಕಿ ಚುಕ್ತಾ: ಕೇಜ್ರಿವಾಲ್

ಐಎಎನ್ಎಸ್
Published 21 ಜನವರಿ 2022, 8:21 IST
Last Updated 21 ಜನವರಿ 2022, 8:21 IST
ಉತ್ತರ ಪ್ರದೇಶದಲ್ಲಿ ನೂತನ ರಾಜಕೀಯ ಅಧ್ಯಾಯ ಆರಂಭಿಸಲು ಆಮ್‌ ಆದ್ಮಿ ಪಕ್ಷ ಯತ್ನ
ಉತ್ತರ ಪ್ರದೇಶದಲ್ಲಿ ನೂತನ ರಾಜಕೀಯ ಅಧ್ಯಾಯ ಆರಂಭಿಸಲು ಆಮ್‌ ಆದ್ಮಿ ಪಕ್ಷ ಯತ್ನ   

ಲಖನೌ: ಉತ್ತರ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಚುನಾವಣಾ ಕಾವು ಏರುತ್ತಿದ್ದು, ರಾಜಕೀಯ ಪಕ್ಷಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ಎಲ್ಲ ರೈತರ ಸಾಲ ಮನ್ನಾ ಮಾಡಲಾಗುವುದು ಮತ್ತು ಹಿಂದಿನ ಸರ್ಕಾರ ಬಾಕಿ ಉಳಿಸಿಕೊಂಡಿರುವ ಕಬ್ಬಿನ ಮೊತ್ತವನ್ನು ಪಾವತಿ ಮಾಡಲಾಗುವುದು ಎಂದು ಆಮ್‌ ಆದ್ಮಿ ಪಾರ್ಟಿ ಹೇಳಿದೆ.

ಈ ಮೊದಲು ಆಮ್‌ ಆದ್ಮಿ ಪಾರ್ಟಿ, ಅಧಿಕಾರಕ್ಕೆ ಬಂದರೆ 300 ಯುನಿಟ್ ಉಚಿತ ವಿದ್ಯುತ್, ಬಾಕಿ ವಿದ್ಯುತ್ ಬಿಲ್ ಮನ್ನಾ, 18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಪ್ರತಿ ತಿಂಗಳು ತಲಾ ₹1,000, ನಿರುದ್ಯೋಗಿ ಯುವಕರಿಗೆ ₹5,000 ಸಹಾಯಧನ ನೀಡುವುದಾಗಿ ಹೇಳಿತ್ತು.

ADVERTISEMENT

ಶುಕ್ರವಾರ ಆಮ್ ಆದ್ಮಿ ಪಾರ್ಟಿ ಮೊದಲ ವರ್ಚುವಲ್ ಸಮಾವೇಶ ಆಯೋಜಿಸುವ ಮೂಲಕ ಚುನಾವಣಾ ಪ್ರಚಾರ ಆರಂಭಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.