ADVERTISEMENT

ಗೋಮಾಂಸ ಮಾರಾಟ ಆರೋಪ: ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ, ಐವರ ಬಂಧನ

ಏಜೆನ್ಸೀಸ್
Published 9 ಏಪ್ರಿಲ್ 2019, 5:30 IST
Last Updated 9 ಏಪ್ರಿಲ್ 2019, 5:30 IST
   

ವಿಶ್ವನಾಥ್: ಗೋಮಾಂಸ ಮಾರಾಟ ಆರೋಪ ಹೊರಿಸಿ ಮುಸ್ಲಿಂ ವ್ಯಕ್ತಿ ಮೇಲೆ ಅಪರಿಚಿತ ಗುಂಪೊಂದು ಹಲ್ಲೆ ನಡೆಸಿದ ಅಮಾನವೀಯ ಘಟನೆ ಅಸ್ಸಾಮ್‌ನ ವಿಶ್ವನಾಥದಲ್ಲಿ ನಡೆದಿದ್ದು, ಈ ಸಂಬಂಧ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಶೌಕತ್ ಅಲಿ (68) ಹಲ್ಲೆಗೊಳಗಾದವ. ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೊದಲ್ಲೇನಿದೆ?

ADVERTISEMENT

ಶೌಕತ್ ಅಲಿಗೆ ಥಳಿಸಿದ ಗುಂಪು ಬಳಿಕ ಅವರನ್ನುನಡುರಸ್ತೆಯಲ್ಲಿ ಕೆಸರಿನ ಮಧ್ಯೆ ಕುಳ್ಳಿರಿಸಿ ಹಂದಿ ಮಾಂಸ ಸೇವಿಸುವಂತೆ ಒತ್ತಾಯಿಸುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ಜೊತೆಗೆ ನೀನು ಬಾಂಗ್ಲಾದೇಶದವನಾ? ಗೋಮಾಂಸ ಮಾರಾಟ ಮಾಡಲು ನಿನಗೆ ಪರವಾನಗಿ ಇದೆಯೇ? ಅಸ್ಸಾಂನ ರಾಷ್ಟ್ರೀಯ ಪೌರ ನೋಂದಣಿಯಲ್ಲಿ ನಿನ್ನ ಹೆಸರು ದಾಖಲಾಗಿದೆಯೇ? ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.